2015 ಜೂನ್ ತಿಂಗಳಲ್ಲಿ ಉತ್ತರಾಖಂಡ್ ಪ್ರವಾಸೋದ್ಯಮ ಇಲಾಖೆಗಾಗಿ ಕೊಹ್ಲಿ 60 ಸೆಕೆಂಡ್ ಅವಧಿಯ ವಿಡಿಯೊವೊಂದರಲ್ಲಿ ನಟಿಸಿದ್ದರು. ಕೊಹ್ಲಿಯವರ ಈ ನಟನೆಗಾಗಿ ರಾವತ್ ಸರ್ಕಾರ 2013ರಲ್ಲಿ ಕೇದಾರನಾಥ್ ಪ್ರವಾಹ ಸಂತ್ರಸ್ತರ ಪುನರ್ವಸತಿ ನಿಧಿಯಿಂದ ಗಾಯಕ ಕೈಲಾಶ್ ಖೇರ್ ಅವರ ಕೈಲಾಶ್ ಎಂಟರ್ ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮೂಲಕ ಹಣ ಪಾವತಿ ಮಾಡಿದೆ ಎಂದು ಆರ್ ಟಿ ಐ ಕಾರ್ಯಕರ್ತ, ಬಿಜೆಪಿ ನಾಯಕ ಅಜೇಂದ್ರ ಅಜಯ್ ಅವರು ಆರೋಪಿಸಿದ್ದಾರೆ. ಆದರೆ ಈ ರೀತಿಯ ಹಣ ವಹಿವಾಟು ನಡೆದಿಲ್ಲ ಎಂದು ಕೊಹ್ಲಿ ಅವರ ಏಜೆಂಟ್ ಬಂಟಿ ಸಜ್ದೇ ಹೇಳಿದ್ದಾರೆ .