ಹೊಡೆದಾಟದಲ್ಲಿ ಕಣ್ಣು ಕಳೆದುಕೊಂಡಿದ್ದ ವ್ಯಕ್ತಿಗೆ 17 ವರ್ಷಗಳ ನಂತರ ಸಿಕ್ಕ ನ್ಯಾಯ

ಹೊಡೆದಾಟದಲ್ಲಿ ಕಣ್ಣು ಕಳೆದುಕೊಂಡು ನ್ಯಾಯಾಲಯದ ಮೆಟ್ಟಿಲೇರಿದ್ದ ವ್ಯಕ್ತಿಗೆ 17 ವರ್ಷಗಳ ನಂತರ ನ್ಯಾಯ ದೊರೆತಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಜಾಫರ್ ನಗರ: ಹೊಡೆದಾಟದಲ್ಲಿ ಕಣ್ಣು ಕಳೆದುಕೊಂಡು ನ್ಯಾಯಾಲಯದ ಮೆಟ್ಟಿಲೇರಿದ್ದ ವ್ಯಕ್ತಿಗೆ 17 ವರ್ಷಗಳ ನಂತರ ನ್ಯಾಯ ದೊರೆತಿದೆ.

1999 ರ ಜೂನ್ 16 ರಂದು ಉತ್ತರ ಪ್ರದೇಶದ ಪತೇಪುರ್ ಗ್ರಾಮದಲ್ಲಿ ವಿದ್ಯುತ್ ತಂತಿ ಕದ್ದ ಆರೋಪದ ಮೇಲೆ ಇಬ್ಬರು ಸಹೋದರರು ವಿಜಯ್ ಪಾಲ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ವಿಜಯ್ ಪಾಲ್ ದೃಷ್ಟಿ ಕಳೆದುಕೊಂಡಿದ್ದ.

ಇಬ್ಬರು ಅಪರಾಧಿಗಳಿಗೆ ತಲಾ 5 ಸಾವಿರ ರು ದಂಡ ಹಾಗೂ 10 ವರ್ಷ ಜೈಲುವಾಸ ಶಿಕ್ಷೆ ನೀಡಿ ಜಿಲ್ಲಾ ಸೆಷನ್ಸ್ ಕೋರ್ಟ್ ಆದೇಶಿಸಿದೆ ಎಂದು ಸರ್ಕಾರಿ ವಕೀಲ ಜಿತೇಂದ್ರ ತ್ಯಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com