ಉತ್ತರಪ್ರದೇಶದ ಕಾರ್ಮಿಕನಾಗಿರುವ ರಾಜು ಎಂಬುವರು ತಮ್ಮ ಮಗ ವಿಪಿನ್ ಅಂಗವೈಕಲ್ಯ ರಕ್ತಹೀನತೆ, ಅಪರೂಪದ ರಕ್ತದ ಕಾಯಿಲೆಯಿಂದ ಬಳಲುತ್ತಿದ್ದು ಈ ನರಕದಿಂದ ಮುಕ್ತಿ ನೀಡುವ ಸಲುವಾಗಿ ದಯಾಮರಣಕ್ಕೆ ಅವಕಾಶ ನೀಡುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ. ಜತೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಪ್ರತ್ಯೇಕ ಪತ್ರವನ್ನು ಬರೆದಿದ್ದಾರೆ.