ಆದರೆ ಪುಣೆಯ ಐಟಿಯಲ್ಲಿ ಕೆಲಸ ಮಾಡುತ್ತಿರುವ ಮಹಾಶಯನೊಬ್ಬ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ತನ್ನ ಪತ್ನಿಗೆ ವರ್ಗಾವಣೆ ಮಾಡಿಸಬೇಕೆಂದು ಟ್ವಿಟರ್ ನಲ್ಲಿ ಸುಷ್ಮಾ ಸ್ವರಾಜ್ ಗೆ ಮನವಿ ಮಾಡಿದ್ದಾನೆ. ಇದಕ್ಕೆ ಖಡಕ್ ಉತ್ತರ ನೀಡಿರುವ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ನಿಮ್ಮ ಪತ್ನಿ ಒಂದು ವೇಳೆ ನನ್ನ ಇಲಾಖೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಇಂತಹ ವರ್ಗಾವಣೆ ಬೇಡಿಕೆ ಮುಂದಿಟ್ಟಿದ್ದರೆ ಈ ವೇಳೆಗೆ ಅಮಾನತು ಆದೇಶ ಹೊರಡಿಸುತ್ತಿದ್ದೆ ಎಂದು ಹೇಳಿದ್ದಾರೆ. ಪುಣೆಯ ವ್ಯಕ್ತಿಗೆ ಪ್ರತಿಕ್ರಿಯೆ ನೀಡಿದ ನಂತರ ಸುಷ್ಮಾ ಸ್ವರಾಜ್ ಪುಣೆಯ ವ್ಯಕ್ತಿ ಮಾಡಿದ್ದ ಟ್ವೀಟ್ ನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಆ ಟ್ವೀಟ್ ನ್ನು ಕಳಿಸಿದ್ದಾರೆ.