ಸಿಧು 'ಮಾನವ ಬಾಂಬ್' ಇದ್ದಂತೆ: ಸುಖ್ಬೀರ್ ಬಾದಲ್

ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಂಸದ ನವಜೋತ್ ಸಿಂಗ್ ಸಿಧು ಅವರು 'ಮಾನವ ಬಾಂಬ್' ಇದ್ದಂತೆ ಎಂದು ಪಂಜಾಬ್ ರಾಜ್ಯದ ಉಪ ಮುಖ್ಯಮಂತ್ರಿ ಸುಖ್ಬೀರ್ ಬಾದಲ್ ಅವರು ಸೋಮವಾರ...
ಪಂಜಾಬ್ ರಾಜ್ಯದ ಉಪ ಮುಖ್ಯಮಂತ್ರಿ ಸುಖ್ಬೀರ್ ಬಾದಲ್
ಪಂಜಾಬ್ ರಾಜ್ಯದ ಉಪ ಮುಖ್ಯಮಂತ್ರಿ ಸುಖ್ಬೀರ್ ಬಾದಲ್
Updated on

ಲುಧಿಯಾನಾ: ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಂಸದ ನವಜೋತ್ ಸಿಂಗ್ ಸಿಧು ಅವರು 'ಮಾನವ ಬಾಂಬ್' ಇದ್ದಂತೆ ಎಂದು ಪಂಜಾಬ್ ರಾಜ್ಯದ ಉಪ ಮುಖ್ಯಮಂತ್ರಿ ಸುಖ್ಬೀರ್ ಬಾದಲ್ ಅವರು ಸೋಮವಾರ ಹೇಳಿದ್ದಾರೆ.

ನವಜೋತ್ ಸಿಂಗ್ ಸಿಧು ವಿರುದ್ಧ ಕಿಡಿಕಾಡಿರುವ ಸುಖ್ಬೀರ್ ಬಾದಲ್ ಅವರು, ಸಿಧು ಅವರು 'ಮಾನವ ಬಾಂಬ್' ಇದ್ದಂತೆ. ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದು. ಇದರಿಂದ ಸಾಕಷ್ಟು ಹಾನಿಯುಂಟಾಗಲಿದೆ. ಸಿಧು ಅವರಿಗೆ ಸಾಕಷ್ಟು ಅಹಂಕಾರವಿದ್ದು, 6 ತಿಂಗಳೊಳಗಾಗಿ ಅವರು ಕಾಂಗ್ರೆಸ್ ತೊರೆದು, ರಾಹುಲ್ ವಿರುದ್ಧ ಮಾತನಾಡುತ್ತಾರೆಂಬುದಕ್ಕೆ ನಾನು ಖಾತರಿಕೊಡುತ್ತೇನೆಂದು ಹೇಳಿದ್ದಾರೆ.

ನಿನ್ನೆಯಷ್ಟೇ ಕಾಂಗ್ರೆಸ್ ಗೆ ಸೇರ್ಪಡೆ ಗೊಂಡಿದ್ದ ನವಜೋತ್ ಸಿಂಗ್ ಸಿಧು ಅವರು, ಸುಖ್ಬೀರ್ ಬಾದಲ್ ವಿರುದ್ದ ಕೆಂಡ ಕಾರಿದ್ದರು. ಸರ್ಕಾರ ರಾಜ್ಯವನ್ನು ನಾಶ ಮಾಡುತ್ತಿದ್ದು, ಪಂಜಾಬ್ ನ್ನು ವಿಮೋಚನೆಗೊಳಿಸಲು ಶ್ರಮಪಡಿಸಲಾಗುತ್ತಿದೆ. ಇದನ್ನು ನನ್ನ ವೈಯಕ್ತಿಕ ಹೋರಾಟವಲ್ಲ, ನಮ್ಮೆಲ್ಲರ ಹೆಮ್ಮೆಯ ಪ್ರತೀಕವಾಗಿರುವ ಪಂಜಾಬ್ ರಾಜ್ಯದ ಅಸ್ತಿತ್ವದಕ್ಕಾಗಿ ಆಗಿದೆ. ಪಂಜಾಬ್ ರಾಜ್ಯದ ವಿಮೋಚನೆಗಾಗಿ ಆಗಿದೆ. ಭಾರತದ ಆಹಾರ ದಿವಾಳಿಕೋರರ ಬಳಿ ಹೇಗೆ ಹೋಯಿತೆಂಬುದನ್ನು ಪ್ರತೀಯೊಬ್ಬರು ಆಲೋಚಿಸಬೇಕಿದೆ.

ಜನರಿಗಾಗಿ ಆಗಿದ್ದ ಸರ್ಕಾರ, ಇದೀಗ ಕುಟುಂಬಕ್ಕಾಗಿ ಆಗಿ ಹೋಗಿದೆ. ಶೀಘ್ರದಲ್ಲಿಯೇ ಬಾದಲ್ ಅವರ ರಹಸ್ಯಗಳನ್ನು ಬಹಿರಂಗಪಡಿಸುತ್ತೇನೆ. ನಾನೊಬ್ಬ ಯೋಧನಾಗಿದ್ದು, ಪಂಜಾಬ್ ಗಾಗಿ ಹೋರಾಟ ಮಾಡಲು ಸಿದ್ಧನಿದ್ದೇನೆ. ಅಕಾಲಿ ದಳ ಉತ್ತಮ ಗುಂಪಾಗಿದ್ದು, ಇದೀಗ ಕುಟುಂಬದ ಸರ್ಕಾರವಾಗಿ ಹೋಗಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com