ಕೊಲೆ ಪ್ರಕರಣ: ಬಿಜೆಪಿ ವಕ್ತಾರನ ಪುತ್ರನಿಗೆ 5 ವರ್ಷ ಜೈಲು ಶಿಕ್ಷೆ

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಮತ್ತು ಪ್ರಸ್ತುತ ಬಿಜೆಪಿ ವಕ್ತಾರ ಎನ್ ಬೈರೆನ್ ಸಿಂಗ್ ಪುತ್ರ ಅಜಯ್ ಗೆ ಐದು ವರ್ಷ ಜೈಲು ಶಿಕ್ಷೆಗೆ...
ಬಿಜೆಪಿ
ಬಿಜೆಪಿ
Updated on

ಇಂಪಾಲ್(ಮಣಿಪುರ): ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಮತ್ತು ಪ್ರಸ್ತುತ ಬಿಜೆಪಿ ವಕ್ತಾರ ಎನ್ ಬೈರೆನ್ ಸಿಂಗ್ ಪುತ್ರ ಅಜಯ್ ಗೆ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಆರು ವರ್ಷಗಳ ಹಳೆ ಕೊಲೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ ನ್ಯಾಯಾಧೀಶರಾದ ಎಂ ಮನೋಜ್ ಕುಮಾರ್ ಸಿಂಗ್ ಅವರು ಆರೋಪಿ ಅಜಯ್ ಗೆ ಐದು ವರ್ಷ ಕಾಲ ಜೈಲು ಶಿಕ್ಷೆ ವಿಧಿಸಿದ್ದಾರೆ. ಜತೆಗೆ ಮೃತ ಇಮಾರ್ ರೋಗರ್ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವಂತೆ ಅಜಯ್ ಮತ್ತು ಆತನ ಕುಟುಂಸ್ಥರಿಗೆ ಸೂಚಿಸಿದ್ದಾರೆ.

ವಿಚಾರಣೆ ವೇಳೆ ಮೃತ ಇರಾಮ್ ರೋಗರ್ ತಾಯಿ ಚಿತ್ರ ಸಹ ಕೋರ್ಟ್ ಹಾಲ್ ನಲ್ಲಿ ಹಾಜರಿದ್ದರು. ಆರೋಪಿ ಅಜಯ್ ಗೆ ಐದು ವರ್ಷ ಕಾಲ ಜೈಲು ಶಿಕ್ಷೆ ವಿಧಿಸುತ್ತಿದ್ದಂತೆ ಆಕೆ ಹರ್ಷ ವ್ಯಕ್ತಪಡಿಸಿದರು.

2011ರ ಮಾರ್ಚ್ 20ರಂದು ಮಣಿಪುರದಲ್ಲಿ ನಡೆದ ಯಾಹೊಶಾಂಗ್ ಉತ್ಸವದ ವೇಳೆ ಅಜಯ್ ಇರಾಮ್ ರೋಗೆರ್ ಎಂಬುವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಪ್ರಕರಣ ಸಂಬಂಧ ಅಜಯ್ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಪ್ರಕರಣದಿಂದ ನಾಲ್ವರನ್ನು ಕೈಬಿಡಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com