ವಿದ್ಯಾವಂತ ಯುವತಿ ಪ್ರಿಯಕರನಿಂದ ಮೋಸ ಹೋದರೆ, ಅತ್ಯಾಚಾರವೆಂದು ಹೇಳುವಂತಿಲ್ಲ: 'ಹೈ' ತೀರ್ಪು

ಮದುವೆಯಾಗುತ್ತೇನೆಂಬ ಭರವಸೆ ಪ್ರತಿ ಅತ್ಯಾಚಾರ ಪ್ರಕರಣಕ್ಕೆ ಪ್ರಚೋದನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ...
ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್
Updated on

ಮುಂಬೈ: ಮದುವೆಯಾಗುತ್ತೇನೆಂಬ ಭರವಸೆ ಪ್ರತಿ ಅತ್ಯಾಚಾರ ಪ್ರಕರಣಕ್ಕೆ ಪ್ರಚೋದನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.

ಮಾಜಿ ಗೆಳತಿಯಿಂದ ಅತ್ಯಾಚಾರ ಪ್ರಕರಣವನ್ನು ಎದುರಿಸುತ್ತಿದ್ದ 21ರ ಪ್ರಾಯದ ಯುವಕರನಿಗೆ ಜಾಮೀನು ಮಂಜೂರು ಮಾಡುವ ಸಂಬಂಧ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಮೃದುಲಾ ಭಟ್ಕರ್ ಅವರು, ವಿದ್ಯಾವಂತ ಯುವತಿಯರು ಸಹಮತದೊಂದಿಗೆ ಪ್ರಿಯಕರನೊಂದಿಗೆ ಮೋಸ ಹೋದರೆ, ಅದನ್ನು ಅತ್ಯಾಚಾರವೆಂದು ಹೇಳುವಂತಿಲ್ಲ ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಮದುವೆಯ ಸಮಯದಲ್ಲಿ ಕನ್ಯತ್ವ ಉಳಿಸಿಕೊಳ್ಳುವುದು ಪ್ರತಿಯೊಬ್ಬ ಮಹಿಳೆಯ ಜವಾಬ್ದಾರಿಯಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಇದಕ್ಕೆ ಹೊಸ ಪ್ರಕ್ರಿಯೆಯನ್ನು ಹುಡುಕಿಕೊಂಡಿದ್ದು, ಮದುವೆಗೂ ಮುನ್ನವೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಸಮಾಜ ವಿಮೋಚಿತಗೊಳ್ಳಲು ಯತ್ನಿಸುತ್ತಿದೆ. ಆದರೆ, ಇದರೊಂದಿಗೆ ಇತರೆ ದೇಶಗಳ ನೈತಿಕ ಭಾರವನ್ನು ಹೊರುತ್ತಿದೆ. ಇಂದಿನ ಯುವ ಪೀಳಿಗೆಗೆ ಲೈಂಗಿಕ ಚಟುವಟಿಕೆ ಬಗ್ಗೆ ತಿಳುವಳಿಕೆಯಿದೆ. ಮದುವೆಯಾಗುತ್ತೇನೆಂದು ಭರವಸೆ ನೀಡುವುದು ಅತ್ಯಾಚಾರಕ್ಕೆ ಪ್ರೇರಣೆಯಾಗುವುದಿಲ್ಲ ಎಂದು ನ್ಯಾಯಮೂರ್ತಿ ಮೃದುಲಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ನಡೆಸಿರುವುದು ಖಂಡನೀಯ. ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಹೆಣ್ಣುಮಕ್ಕಳು, ತದನಂತರದ ಜವಾಬ್ದಾರಿ ಹೊತ್ತುಕೊಳ್ಳುವುದನ್ನು ನಿರಾಕರಿಸುವುದು ಸರಿಯಲ್ಲ.

ಗಂಡು ಹೆಣ್ಣಿನ ಸಂಬಂಧ ಕಡಿದುಹೋದ ಬಳಿಕ ಅತ್ಯಾಚಾರ ಪ್ರಕರಣ ದಾಖಲಿಸುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿ ಹೋಗಿದೆ. ಮಹಿಳೆ ಪ್ರಾಯ ಪ್ರಬುದ್ಧಳಾಗಿದ್ದು, ವಿದ್ಯಾವಂತ ಹೆಣ್ಣುಮಗಳು ವಿವಾಹ ಪೂರ್ವ ಪರಿಣಾಮದ ಬಗ್ಗೆ ಆಕೆಗೆ ತಿಳಿದಿರುತ್ತದೆ ಎಂದು ಇದೇ ವೇಳೆ ಈ ಹಿಂದಿನ ಆದೇಶವನ್ನು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com