ಚಂಡೀಗಢ: 'ಏಕ್ ಪರಿವಾರ್, ಏಕ್ ರೋಜ್ ಘಾರ್' ಯೋಜನೆಯಡಿ ಬಿಜೆಪಿ ಪ್ರತಿ ಬಡವರಿಗೆ ಮನೆ ಒದಗಿಸಿಕೊಡುವ, 2 ಕೆಜಿ ತುಪ್ಪ, 5 ಕೆಜಿ ಸಕ್ಕರೆಯನ್ನು ನೀಲಿ ಕಾರ್ಡು ಹೊಂದಿದವರಿಗೆ ನೀಡುವ, ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಪಿಎಚ್ ಡಿವರೆಗೆ ಉಚಿತ ಶಿಕ್ಷಣ ನೀಡುವ ಚುನಾವಣಾ ಭರವಸೆಗಳ ಪ್ರಣಾಳಿಕೆಯನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನಿನ್ನೆ ಜಲಂದರ್ ನಲ್ಲಿ ಬಿಡುಗಡೆ ಮಾಡಿದರು. ಇದು ಪಂಜಾಬ್ ಚುನಾವಣೆಯಲ್ಲಿ ಬಿಜೆಪಿ ಕಡೆಯಿಂದ ಜನತೆಗೆ ನೀಡುತ್ತಿರುವ ಭರವಸೆಗಳಾಗಿವೆ.