ನವದೆಹಲಿ: ಬಿಜೆಪಿ ನಾಯಕ ವಿನಯ್ ಕಟಿಯಾರ್ ಪ್ರಿಯಾಂಕಾ ಗಾಂಧಿ ಬಗ್ಗೆ ಮಾಡಿರುವ ಟೀಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರ ಪತಿ ರಾಬರ್ಟ್ ವಾದ್ರಾ, ಅವರ ಹೇಳಿಕೆ ನಾಚಿಕೆಗೇಡು ಆಗಿದ್ದು, ಸಾರ್ವಜನಿಕ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ.
ಇಂತಹ ಹೇಳಿಕೆ ಕೆಲವು ರಾಜಕೀಯ ನಾಯಕರ ನಾಚಿಕೆಯ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ವಾದ್ರಾ ಹೇಳಿದ್ದಾರೆ.
ಬಿಜೆಪಿ ರಾಜ್ಯಸಭಾ ಸದಸ್ಯ ವಿನಯ್ ಕಟಿಯಾರ, ಪ್ರಿಯಾಂಕಾ ಗಾಂಧಿ ಅತ್ಯಂತ ಸುಂದರ ಸ್ಟಾರ್ ಪ್ರಚಾರಕಿಯಲ್ಲ, ಉತ್ತರ ಪ್ರದೇಶದ ಮುಂಬರುವ ಚುನಾವಣೆಗೆ ಸ್ಟಾರ್ ಪ್ರಚಾರಕಿಯಾಗಿ ಅವರು ಹೋದರೆ ಏನೂ ತೊಂದರೆಯಿಲ್ಲ. ಅವರಿಗಿಂತ ಸುಂದರವಾದ ಪ್ರಚಾರಕಿಯರಿದ್ದಾರೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದರು.