ಹಣ ಮಾಡಲು ರಾಜಕೀಯಕ್ಕೆ ಬಂದೆ: ಉತ್ತರ ಪ್ರದೇಶ ಸ್ವತಂತ್ರ್ಯಅಭ್ಯರ್ಥಿ ಆಘಾತಕಾರಿ ಹೇಳಿಕೆ

ಹಣ ಮಾಡುವ ಉದ್ದೇಶದಿಂದ ರಾಜಕೀಯ ಪ್ರವೇಶಿಸಿದ್ದಾಗಿ ಉತ್ತರ ಪ್ರದೇಶ ವಿಧಾನಯ ಸಭೆ ಚುನಾವಣೆಯ ಸ್ವತಂತ್ರ್ಯ ಅಭ್ಯರ್ಥಿಯೊಬ್ಬರು ನೀಡಿರುವ ಹೇಳಿಕೆ ವಿಡಿಯೋ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಆಗ್ರಾ :ಹಣ ಮಾಡುವ ಉದ್ದೇಶದಿಂದ ರಾಜಕೀಯ ಪ್ರವೇಶಿಸಿದ್ದಾಗಿ ಉತ್ತರ ಪ್ರದೇಶ ವಿಧಾನಯ ಸಭೆ ಚುನಾವಣೆಯ ಸ್ವತಂತ್ರ್ಯ ಅಭ್ಯರ್ಥಿಯೊಬ್ಬರು ನೀಡಿರುವ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಗ್ರಾದ ಸ್ವತಂತ್ರ್ಯ ಅಭ್ಯರ್ಥಿಯಾಗಿರುವ ಚೌಧುರಿ ಹೇಳಿಕೆ ಪರೋಕ್ಷವಾಗಿ ಎಲ್ಲರೂ ಹಣ ಮಾಡಲು ರಾಜಕೀಯಕ್ಕೆ ಬಂದಿದ್ದಾರೆ ಎಂಬುದನ್ನು ಸೂಚಿಸುತ್ತಿದೆ. ಹಣ ಮಾಡಲು ರಾಜಕೀಯಕ್ಕೆ ಬಂದ ರಾಜಕಾರಣಿಗಳನ್ನು ತಾವು ಅನುಸರಿಸುತ್ತಿರುವುದಾಗಿ ತಿಳಿಸಿದ್ದಾರೆ.
ಕೇವಲ ಹಣ ಮಾಡುವ ಒಂದೇ ಒಂದು ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದು, ಜನರನ್ನು ನಾನು ಮೂರ್ಖರನ್ನಾಗಿಸುವುದಾಗಿ ತಿಳಿಸಿದ್ದಾರೆ. 
ಜನರನ್ನು ಮೂರ್ಖರನ್ನಾಗಿಸಿ ಪ್ರಧಾನಿ ದೇಶದ ಮುಖ್ಯಸ್ಥರಾಗಿದ್ದಾರೆ, ನಾನು ಕೂಡ ಹಾಗೆಯೇ ಎಂದು ಹೇಳಿರುವ ಅವರು, ಜನರನ್ನುಮೂರ್ಖರನ್ನಾಗಿಸಿ ಯಾರು ಬೇಕಾದರೂ ಪ್ರಧಾನಿಯಾಗಬಹುದು, ನನಗೂ ಕೂಡ ಆ ರೀತಿಯ ಪ್ರತಿಭೆಇದ್ದು, ನಾನು ಕೂಡ ಅವರುಗಳ ಹೆಜ್ಜೆಯನ್ನು ಅನುಸರಿಸುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com