ಭೂ ಒತ್ತುವರಿ ಆರೋಪದ ಮೇಲೆ ಜೆಟ್ ಏರ್ವೇಸ್ ಉಪಾಧ್ಯಕ್ಷನ ಬಂಧನ

ಭೂ ಒತ್ತುವರಿ ಆರೋಪದ ಮೇಲೆ ಭಾನುವಾರ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್ವೇಸ್ ನ ಭದ್ರತಾ ವಿಭಾಗದ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಘಾಜಿಯಾಬಾದ್‌: ಭೂ ಒತ್ತುವರಿ ಆರೋಪದ ಮೇಲೆ ಭಾನುವಾರ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್ವೇಸ್ ನ ಭದ್ರತಾ ವಿಭಾಗದ ಉಪಾಧ್ಯಕ್ಷ ಕರ್ನಲ್ ಅವ್ನೀತ್‌ ಸಿಂಗ್‌ ಬೇಡಿ ಅವರನ್ನು ಬಂಧಿಸಲಾಗಿದೆ.
ಇಂದು ಬೆಳಗ್ಗೆ ಅವ್ನೀತ್‌ ಸಿಂಗ್‌ ಬೇಡಿ ಅವರನ್ನು ಉತ್ತರಪ್ರದೇಶದ ಸಹಿಬಬಾದ್‌ ಪೊಲೀಸರು ಬಂಧಿಸಿದ್ದಾರೆ.
ಅವ್ನೀತ್‌ ಸಿಂಗ್‌ ಬೇಡಿ ಅವರು ದೆಹಲಿಯಲ್ಲಿ ಮಹಾನಗರ ಪಾಲಿಕೆಗೆ ಸೇರಿದ ಕೋಟ್ಯಾಂತರ ರುಪಾಯಿ ಮೌಲ್ಯದ ಭೂಮಿ ಒತ್ತುವರಿ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಭೂ ಒತ್ತುವರಿ ಆರೋಪದ ತನಿಖೆಯ ಭಾಗವಾಗಹಿ ಜೆಟ್ ಏರ್ವೇಸ್ ಉಪಾಧ್ಯಕ್ಷರನ್ನು ವಶಕ್ಕೆ ಪಡೆಯಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com