ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿ ಪೃಥ್ವಿರಾಜ್(29), ಸ್ನಾನ ಮಾಡಲೆಂದು ತನ್ನ ಇಬ್ಬರು ಸ್ನೇಹಿತರ ಜೊತೆ ಸಮುದ್ರಕ್ಕೆ ತೆರಳಿದ್ದಾನೆ. ಮೂವರು ಸ್ನಾನ ಮಾಡುತ್ತಿದ್ದ ವೇಳೆ ಪೃಥ್ವಿರಾಜ್ ನೀರಿನಲ್ಲಿ ಮುಳುಗಿದ್ದಾನೆ, ಕೂಡಲೇ ಆತನ ಸ್ನೇಹಿತರು ಹುಡುಕಿದಾಗ ಆತ ಎಲ್ಲಿಯೂ ಕಾಣಲಿಲ್ಲ. ನಂತರ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಮೀನುಗಾರರು ಶವವನ್ನು ಹುಡುಕಿದರೂ ಪ್ರಯೋಜನವಾಗಲಿಲ್ಲ.