ಅನಂತ್ ನಾಗ್ ಜಿಲ್ಲೆಯಲ್ಲಿ 2016ರ ಜುಲೈ 8ರಂದು ನಡೆಸಲಾಗಿದ್ದ ಎನ್ ಕೌಂಟರ್ ನಲ್ಲಿ ಉಗ್ರ ಬುರ್ಹಾನ್ ವಾನಿಯನ್ನು ಹೊಡೆದುರುಳಿಸಲಾಗಿತ್ತು. ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ ಉಲ್ಬಣಗೊಂಡಿತ್ತು. ನಿಂತರ ಹಿಂಸಾಚಾರ, ಕಲ್ಲು ತೂರಾಟ, ಗೋಲಿಬಾರ್ ನಿಂದಾಗಿ ಕಾಶ್ಮೀರ ತತ್ತರಿಸಿ ಹೋಗಿತ್ತು. 53 ದಿನಗಳ ಬಳಿತ ಕಾಶ್ಮೀರದಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ತೆರವುಗೊಳಿಸಲಾಗಿತ್ತು. ಇದರಂತೆ ನಾಳೆ ಬುರ್ಹಾನ್ ವಾನಿ ಸಾವಿನ ವಾರ್ಷಿಕ ದಿನಾಚರಣೆಯನ್ನು ನಡೆಸಲು ಕಾಶ್ಮೀರದಲ್ಲಿ ಸಿದ್ಧತೆಗಳು ನಡೆದಿವೆ.