ಉಗ್ರರ ದಾಳಿ ನಂತರ ಇಂದು ಅಮರನಾಥಕ್ಕೆ ಹೊರಟ ಯಾತ್ರಿಕರ ಹೊಸ ತಂಡ

ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಏಳು ಮಂದಿ ಅಮರನಾಥ ಯಾತ್ರಿಕರನ್ನು ಉಗ್ರಗಾಮಿಗಳು ಕೊಂದ ನಂತರ ಇಂದು ಬೆಳಗ್ಗೆ ಯಾತ್ರಿಕರ....
Updated on
ಜಮ್ಮು(ಜಮ್ಮು ಮತ್ತು ಕಾಶ್ಮೀರ): ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಏಳು ಮಂದಿ ಅಮರನಾಥ ಯಾತ್ರಿಕರನ್ನು ಉಗ್ರಗಾಮಿಗಳು ಕೊಂದ ನಂತರ ಇಂದು ಬೆಳಗ್ಗೆ ಯಾತ್ರಿಕರ ಹೊಸ ತಂಡ ಅಮರನಾಥ ದರ್ಶನಕ್ಕೆ ತೆರಳಿದೆ.
ಅಮರನಾಥ ಯಾತ್ರಿಕರ ಮೇಲಿನ ಭಯೋತ್ಪಾದಕ ದಾಳಿಯ ತನಿಖೆ ನಡೆಸುವುದಾಗಿ ಮತ್ತು ಇನ್ನು ಮುಂದಿನ ಯಾತ್ರೆ ಶಾಂತಿಯುತವಾಗಿ ನಡೆಸುವ ಭರವಸೆಯನ್ನು ಸಿಆರ್ ಪಿಎಫ್ ಇನ್ಸ್ ಪೆಕ್ಟರ್ ಜನರಲ್ ಜುಲ್ಫಿಕಾರ್ ಹಸನ್ ಭರವಸೆ ನೀಡಿದ್ದಾರೆ.
ಘಟನೆ ಕುರಿತು ಜಮ್ಮು-ಕಾಶ್ಮೀರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು, ಆದರೆ ನಾವು ಅಪರಾಧಿಗಳನ್ನು ಹಿಡಿಯುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.
ಅನಂತ್ ನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಕರ ಮೇಲೆ ಉಗ್ರರು ನಡೆಸಿದ ದಾಳಿಯಿಂದ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ. ಸುಮಾರು 15 ಮಂದಿ ಗಾಯಗೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com