ಬಸ್ಸಿನಲ್ಲಿನ ಯಾತ್ರಿಕರ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿ ಯಾತ್ರಿಕರು ಹತರಾದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಬಸ್ಸು ದೇವಳದ ಮಂಡಳಿಯಲ್ಲಿ ದಾಖಲಾಗಿಲ್ಲ. ಬಸ್ಸಿಗೆ ಯಾವುದೇ ಭದ್ರತೆಗಳಿರಲಿಲ್ಲ. ಘಟನೆಯ ತನಿಖೆ ನಡೆಸುತ್ತಿರುವ ಆಡಳಿತ ಅಧಿಕಾರಿಗಳು ಅಂತಿಮ ವರದಿ ನೀಡಿದ ನಂತರ ಈ ಬಗ್ಗೆ ಹೆಚ್ಚಿನ ವಿವರ ನೀಡುವುದಾಗಿ ನಾಯ್ಡು ಹೇಳಿದರು.