ತಂದೆಯ ಕವಿತೆ ಬಳಸಿದ್ದಕ್ಕೆ ಆಪ್ ನಾಯಕ ಕುಮಾರ್ ವಿಶ್ವಾಸ್ ವಿರುದ್ಧ ಬಚ್ಚನ್ ಗರಂ

ನಟ ಅಮಿತಾಬ್ ಬಚ್ಚನ್ ತಮ್ಮ ತಂದೆ ಹರಿವಂಶ್ ರಾಯ್'ರ ಕವಿತೆಯ ಸಾಲುಗಳನ್ನು ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಅವರು ಬಳಸಿಕೊಂಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ...
ನಟ ಅಮಿತಾಬ್ ಬಚ್ಚನ್
ನಟ ಅಮಿತಾಬ್ ಬಚ್ಚನ್
ನವದೆಹಲಿ: ನಟ ಅಮಿತಾಬ್ ಬಚ್ಚನ್ ತಮ್ಮ ತಂದೆ ಹರಿವಂಶ್ ರಾಯ್'ರ ಕವಿತೆಯ ಸಾಲುಗಳನ್ನು ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಅವರು ಬಳಸಿಕೊಂಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
ಈ ಕುರಿತು ಅಮಿತಾಭ್, ವಿಶ್ವಾಸ್'ಗೆ ಹಕ್ಕು ಸ್ವಾಮ್ಯತೆ ಉಲ್ಲಂಘನೆಯಡಿ ನೋಟಿಸ್ ನೀಡಿದ್ದು, ಈ ಯೂಟ್ಯೂಬ್ ವಿಡಿಯೋದಿಂದ ಸಂಪಾದಿಸಿದ ಮಾಹಿತಿ ನೀಡಲು ಸೂಚಿಸಿದ್ದಾರೆ. 
ಅಮಿತಾಭ್ ಬಚ್ಚನ್ ಅವರಿಂದ ನೋಟಿಸ್ ಪಡೆದ ಬಳಿಕ ಪ್ರತಿಕ್ರಿಯೆ ನೀಡಿರುವ ಕುಮಾರ್ ವಿಶ್ವಾಸ್ ಅವರು, ವಿಡಿಯೋದಲ್ಲಿ ಕಾವ್ಯ ಬಳಕೆ ವಿರುದ್ಧ ಬಿಗ್ ಬಿ ನೋಟಿಸ್ ನೀಡಿದ್ದು, ಈ ವಿಡಿಯೋವನ್ನು ಯೂಟ್ಯೂಬ್ ನಿಂದ ಹಿಂಪಡೆದಿರುವೆ. ಇದರಿಂದ ಬಂದ ರೂ.32 ಅನ್ನು ನೀಡುತ್ತೇನೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com