ಪ್ರವಾಹದಿಂದಾಗಿ ಧೆಮಾಜಿ, ಬಿಸ್ವನಾಥ್, ಲಕ್ಷ್ಮಿಪುರ, ಸೋನಿತ್ಪುರ, ಡರ್ರಾಂಗ್, ನಲ್ಬಾರಿ, ಬರ್ಪೇಟಾ, ಬೊಂಗೈಗಾಂವ್, ಚಿರಾಂಗ್, ಕೊಕ್ರಾಜಾರ್, ಥುಬ್ರಿ, ಸೊಪುತ್ ಸಲ್ಮಾರಾ, ಗೋಲಾಪರ, ಮೊರಿಗಾಂವ್, ನಾಗಾಂವ್, ಕರ್ಬಿ ಅಂಗ್ಲಾಂಗ್, ಗೊಲಾಘಾಟ್, ಜರ್ಹಟ್ ಮಜುಲಿ, ಸಿವ್ಸಾಗರ್, ಚಾರೈಡೋ, ದಿಬ್ರುಗರ್ಹ್, ಕರೀಂಗಂಜ್ ಮತ್ತು ಕ್ಯಾಚರ್ ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
25 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದು, ರಾಜ್ಯದಲ್ಲಿ 25 ಜಿಲ್ಲೆಗಳ 1,795 ಗ್ರಾಮದ 11,93,458 ಲಕ್ಷ ಮಂದಿ ಪ್ರವಾಹ ಪೀಡಿತರಾಗಿದ್ದಾರೆ, ವಿವಿಧ ಜಿಲ್ಲೆಗಳಲ್ಲಿ ಸುಮಾರು 129 ಪರಿಹಾರ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು, ನಿರಾಶ್ರಿತ ಜನರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆಂದು ಹೇಳಿದ್ದಾರೆ.