ಶಂಕರ್ ಸಿಂಗ್ ವಘೇಲಾ
ದೇಶ
ವಘೇಲಾ ಕಾಂಗ್ರೆಸ್ ತೊರೆದಿದ್ದು ದುರದೃಷ್ಟಕರ: ಕಾಂಗ್ರೆಸ್
ಗುಜರಾತ್ ಕಾಂಗ್ರೆಸ್ ನಾಯಕ ಶಂಕರ್ ಸಿಂಗ್ ವಘೇಲಾ ಪಕ್ಷ ತೊರೆದಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷ ವಘೇಲಾ ಅವರ ರಾಜೀನಾಮೆಯನ್ನು ದುರದೃಷ್ಟಕರ ಎಂದು ಹೇಳಿದೆ.
ನವದೆಹಲಿ: ಗುಜರಾತ್ ಕಾಂಗ್ರೆಸ್ ನಾಯಕ ಶಂಕರ್ ಸಿಂಗ್ ವಘೇಲಾ ಪಕ್ಷ ತೊರೆದಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷ ವಘೇಲಾ ಅವರ ರಾಜೀನಾಮೆಯನ್ನು ದುರದೃಷ್ಟಕರ ಎಂದು ಹೇಳಿದೆ.
ವಘೇಲಾ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಅಶೋಕ್ ಚೌಹಾಣ್, ಈ ಸಂದರ್ಭದಲ್ಲಿ ವಘೇಲಾ ಅವರು ಪಕ್ಷ ತೊರೆದಿರುವುದು ಬೇಸರದ ಸಂಗತಿ, ಇದು ಪಕ್ಷದ ಜೊತೆಗೆ ನಿಲ್ಲಬೇಕಿರುವ ಸಂದರ್ಭ. ದೇಶ ಈಗ ಸಂಕಷ್ಟದ ಸ್ಥಿತಿಯಲ್ಲಿದೆ. ಇಂತಹ ಸ್ಥಿತಿಯಲ್ಲಿ ಪಕ್ಷವನ್ನು ತೊರೆದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ..
ಶಂಕರ್ ಸಿಂಗ್ ವಘೇಲಾ ರೀತಿಯ ನಾಯಕರ ಅವಶ್ಯಕತೆ ಕಾಂಗ್ರೆಸ್ ನಂತಹ ಪುರಾತನ ಪಕ್ಷಕ್ಕೆ ಇದೆ. ಶಂಕರ್ ಸಿಂಗ್ ವಘೇಲಾ ತಪ್ಪು ನಿರ್ಧಾರ ಕೈಗೊಂಡಿದ್ದಾರೆ ಎನಿಸುತ್ತಿದೆ ಎಂದು ಜೆಡಿಯು ನಾಯಕ ಸುನಿಲ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಡವಿದ್ದಾರೆ ಎಂದು ಆರೋಪಿ ಕಾಂಗ್ರೆಸ್ ವಘೇಲಾರನ್ನು ಪಕ್ಷದಿಂದ ಕಿತ್ತುಹಾಕಿದೆ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಗಾಂಧಿನಗರದಲ್ಲಿ ಮಾತನಾಡಿದ ವಘೇಲಾ, ಕಾಂಗ್ರೆಸ್ ಪಕ್ಷ ನನ್ನನ್ನು ಉಚ್ಛಾಟಿಸುವುದು ಬೇಡ. ನಾನೇ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜಿನಾಮೆ ನೀಡುತ್ತೇನೆ ಎಂದು ಹೇಳಿ ಪಕ್ಷವನ್ನು ತೊರೆಯುತ್ತಿರುವುದರ ಬಗ್ಗೆ ಘೋಷಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ