ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಬಿಶಂಬರ್ ನಾಥ್ ಸನಾತನ್ ಧರ್ಮ ಅಂತರ ಕಾಲೇಜಿನಲ್ಲಿ ರಾಮನಾಥ್ ಕೋವಿಂದ್ ಅವರು ಶಾಲಾ ಶಿಕ್ಷಣವನ್ನು ಪೂರೈಸಿದ್ದರು. ತಮ್ಮ ಶಾಲೆಯ ಹಳೆ ವಿದ್ಯಾರ್ಥಿ ಇಂದು ರಾಷ್ಟ್ರಪತಿಯಾದ ಸಂತಸದಲ್ಲಿ ಶಾಲೆಯ ಅಧಿಕಾರಿಗಳು ಶಿಕ್ಷಕರು,ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಹಾಗೂ ದಾರಿಹೋಕರಿಗೆ ಭೋಜನ ನೀಡಿದ್ದರು.