ಘಟ್ಕೋಪರ್ ಕಟ್ಟಡ ಕುಸಿತ ಪ್ರಕರಣ: ಮುಂಬಯಿಯಲ್ಲಿ ಶಿವಸೇನೆ ಮುಖಂಡ ಸುನಿಲ್ ಶೆತಾಪ್ ಬಂಧನ

ಘಾಟ್ಕೊಪರ್‌ನಲ್ಲಿ ಮಂಗಳವಾರ 4 ಅಂತಸ್ತಿನ ವಸತಿ ಕಟ್ಟಡ ಕುಸಿದು 17 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ...
ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಎನ್ ಡಿ ಆರ್ ಎಫ್ ಸಿಬ್ಬಂದಿ
ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಎನ್ ಡಿ ಆರ್ ಎಫ್ ಸಿಬ್ಬಂದಿ
Updated on
ಮುಂಬಯಿ: ಘಾಟ್ಕೊಪರ್‌ನಲ್ಲಿ ಮಂಗಳವಾರ 4 ಅಂತಸ್ತಿನ ವಸತಿ ಕಟ್ಟಡ ಕುಸಿದು 17 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಪೊಲೀಸರು ಶಿವಸೇನಾ ಮುಖಂಡ ಸುನಿಲ್ ಶೆತಾಪ್ ಅವರನ್ನು ಬಂಧಿಸಿದ್ದಾರೆ.
ಕಟ್ಟಡದಲ್ಲಿ ಕಾನೂನು ಬಾಹಿರವಾಗಿ ರಿಪೇರಿ ಕಾಮಗಾರಿ ಮಾಡಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. 
ಈ ಕಟ್ಟಡದ ನೆಲ ಮಹಡಿಯಲ್ಲಿ ನರ್ಸಿಂಗ್ ಹೋಮ್ ಇದೆ. ಶೆತಾಪ್ ಗೆ ಸೇರಿದ ಈ ನರ್ಸಿಂಗ್ ಹೋಮ್ ರಿಪೇರಿ ನಡೆಸಲಾಗುತ್ತಿತ್ತು, ಭಾರತೀಯ ದಂಡ ಸಂಹಿತೆ ಅನ್ವಯ ಶೆತಾಪ್ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಲಾಗುತ್ತಿದೆ. 
ಮಂಗಳವಾರ ಬೆಳಗ್ಗೆ 7 ಗಂಟೆಗೆ ಆತನನ್ನು ಬಂಧಿಸಿ ಕಳೆದ ರಾತ್ರಿ ಸುಮಾರು 3 ತಾಸುಗಳ ಕಾಲ ವಿಚಾರಣೆಗೊಳಪಡಿಸಲಾಯಿತು. 
ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸಿ 28 ಮಂದಿಯನ್ನುಅವಶೇಷಗಳ  ಅಡಿಯಿಂದ ರಕ್ಷಿಸಲಾಗಿದೆ. 11 ಮಂದಿ ಗಂಭೀರ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 35 ವರ್ಷ ಹಳೆಯ ಸಾಯಿದರ್ಶನ್‌ ಅಪಾರ್ಟ್‌ಮೆಂಟ್‌ ನಿನ್ನೆ ಬೆಳಗ್ಗೆ 10.45ರ ವೇಳೆಗೆ ಕುಸಿತಗೊಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com