ಚರಂಡಿಯ 20 ಅಡಿ ಆಳಕ್ಕೆ ಎಸ್.ಶ್ರೀನಿವಾಸನ್ ಅವರ ಮಗ ಬಿದ್ದಿದ್ದನು. ನಂತರ ಅವನನ್ನು ರಕ್ಷಿಸಲಾಯಿತು. ಈ ಸಂದರ್ಭದಲ್ಲಿ ಮಗುವಿನ ಇಡೀ ದೇಹ ಕೊಳಚೆ ನೀರಿನಲ್ಲಿ ಮುಳುಗಿ ಹೋಗಿತ್ತು. ಆತನ ಮುಖ, ಮೂಗು, ಬಾಯಿ ಮತ್ತು ದೇಹದ ಎಲ್ಲಾ ಭಾಗಗಳಿಗೆ ಕೊಳಕು ನೀರು ಮತ್ತು ಕಸ ಮೆತ್ತಿಕೊಂಡಿತ್ತು. ಕೂಡಲೇ ಅವನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು. ತಮ್ಮ ಮಗನ ವೈದ್ಯಕೀಯ ವೆಚ್ಚವಾಗಿ 2.1 ಲಕ್ಷ ರೂಪಾಯಿ ಖರ್ಚಾಗಿತ್ತು.