ಉದಾರ ಮನಸ್ಸಿನ ಜನರು ಇದೇ ರೀತಿಯ ಪ್ರತಿಕ್ರಿಯೆಗಳನ್ನೇ ನೀಡುತ್ತಾರೆಂದು ನಾನು ಊಹಿಸಿದ್ದೆ. ಸೇನಾ ಯೋಧರ ಬಗ್ಗೆ ಅರುಂಧಿತಿ ರಾಯ್ ಅವರು ಮಾತನಾಡಿದಾಗ ಆಗ ಏಕೆ ಇತರರರು ಎನನ್ನೂ ಮಾತನಾಡುವುದಿಲ್ಲ? ಅರುಂಧತಿ ರಾಯ್ ಸರಿಯಿದ್ದಾರೆಂದು ಹೇಳುವುದಾದರೆ, ನಾನು ಕೂಡ ಸರಿಯಾಗಿಯೇ ಇದ್ದೇನೆ. ಆಕೆ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದರೆ, ನಾನೂ ಕೂಡ ವಿಷಾದ ವ್ಯಕ್ತಪಡಿಸುತ್ತೇನೆ. ಸುಳ್ಳು ಸುದ್ದಿಯನ್ನು ನಾನು ನಂಬುತ್ತೇನೆ. 2002ರ ಗೋದ್ರಾ ಹತ್ಯೆ ಬಗ್ಗೆ ರಾಯ್ ಅವರು ಯಾವ ರೀತಿ ಹೇಳಿಕೆ ನೀಡಿದ್ದರು? ನಿಮಗೆ ವಾಕ್ ಸ್ವಾತಂತ್ರ್ಯ ಇದೆ ಎಂದಾದರೆ, ನನಗೂ ಆ ಸ್ವಾತಂತ್ರ್ಯವಿದೆ ಎಂದು ತಿಳಿಸಿದ್ದಾರೆ.