ಪಾಟ್ನಾ ಎಸ್ಎಸ್ ಪಿ ಮನು ಮಹಾರಾಜ್ ಈ ಬಗ್ಗೆ ಮಾಹಿತಿ ನೀಡಿದ್ದು, ಕಲಾ ವಿಭಾಗದಲ್ಲಿ ಕೋಲ್ಕತಾದ ಚಿಟ್ ಫಂಡ್ ಕಂಪನಿಯ 15 ಲಕ್ಷ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಜಾರ್ಖಂಡ್ ನ ಲ್ಲಿ ಚಿಟ್ ಫಂಡ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್ ಗೆ ಜನರು ತಮ್ಮ ಹಣವನ್ನು ವಾಪಸ್ ನೀಡುವಂತೆ ಒತ್ತಡ ಹೇರುತ್ತಿದ್ದ ಹಿನ್ನೆಲೆಯಲ್ಲಿ 2013 ರಲ್ಲಿ ಪಾಟ್ನಾದಿಂದ ತಪ್ಪಿಸಿಕೊಂಡಿದ್ದ. ಇದಾದ ಬಳಿಕ ಸರ್ಕಾರಿ ಕೆಲಸ ಪಡೆಯಲು ಯತ್ನಿಸಿದ್ದ ಗಣೇಶ್ ತನ್ನ ವಯಸ್ಸನ್ನು 18 ವರ್ಷದಷ್ಟು ಕಡಿಮೆ ನಮೂದಿಸಿದ್ದ ಎಂದು ಎಸ್ಎಸ್ ಪಿ ತಿಳಿಸಿದ್ದಾರೆ.