ಎಂ.ವೆಂಕಯ್ಯ ನಾಯ್ಡು
ದೇಶ
ಎನ್ ಡಿಟಿವಿ ಸುದ್ದಿ ವಾಹಿನಿಯ ಸಾಮೂಹಿಕ ಬೇಟೆ ಆರೋಪ ನಿರಾಕರಿಸಿದ ಕೇಂದ್ರ ಸರ್ಕಾರ
ತಮ್ಮ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂಬ ಎನ್ ಡಿಟಿವಿ ಸುದ್ದಿ ವಾಹಿನಿಯ...
ನವದೆಹಲಿ: ತಮ್ಮ ವಿರುದ್ಧ ಸಿಬಿಐ ಮತ್ತು ವಿವಿಧ ತನಿಖಾ ಸಂಸ್ಥೆಗಳು ಸಾಮೂಹಿಕ ಬೇಟೆ ನಡೆಸುತ್ತಿವೆ ಎಂಬ ಎನ್ ಡಿಟಿವಿ ಸುದ್ದಿ ವಾಹಿನಿಯ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು, ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದೆ. ಇದರ ಹಿಂದೆ ಸರ್ಕಾರದ ಯಾವುದೇ ಪಿತೂರಿ ಇಲ್ಲ ಎಂದರು.
ಮಧ್ಯ ಪ್ರವೇಶಿಸುವುದರಲ್ಲಿ ಸರ್ಕಾರಕ್ಕೆ ನಂಬಿಕೆಯಿಲ್ಲ. ಸಿಬಿಐಗೆ ಮಾಹಿತಿ ಸಿಕ್ಕಿ ಈ ಕ್ರಮಕ್ಕೆ ಮುಂದಾಗಿರಬಹುದು ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ