ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಕಿರುಕುಳ ಹಳೆಯ ಆರೋಪಗಳನ್ನು ಕೆದಗಿ ಶೋಧ ನಡೆಸಿ ಕೇಸು ದಾಖಲಿಸಿದ್ದಾರೆ. ಎನ್ ಡಿಟಿವಿ ಮತ್ತು ಅದರ ಪ್ರವರ್ತಕರು ನಿರಂತರವಾಗಿ ಇದರ ವಿರುದ್ಧ ಹೋರಾಡಲಿದೆ. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಮುಕ್ತ ಅಭಿಪ್ರಾಯಕ್ಕೆ ಬೆಲೆ ಇದ್ದು ಇಂತಹ ಆಪಾದನೆಗಳಿಗೆ ಹೆದರುವುದಿಲ್ಲ, ಹೋರಾಡುತ್ತೇವೆ, ದೇಶದ ಸ್ವಾತಂತ್ರ್ಯಕ್ಕಾಗಿ ಇಂತಹ ದುಷ್ಟ ಶಕ್ತಿಗಳ ವಿರುದ್ಧ ಶಕ್ತಿ ಮೀರಿ ಹೋರಾಡುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.