ಎಎನ್ಐ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿದ ನ್ಯಾಯವಾದಿ ಹಾಗೂ ಕಾರ್ಯಕರ್ತೆ ಅಭಾ ಸಿಂಗ್, ಕರ್ನಾಟಕದಲ್ಲಿ ನಡೆದಿರುವ ಘಟನೆ ನೋಡಿದರೆ ಕೋಮುವಾದಿಗಳ ಮೇಲೆ ದೌರ್ಜನ್ಯವೆಸಗುವ ಪ್ರವೃತ್ತಿ ಕಂಡುಬರುತ್ತಿದೆ. ಮರ್ಯಾದಾ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದು ಉತ್ತರ ಭಾರತದಲ್ಲಾಗಿರಲಿ, ದಕ್ಷಿಣ ಭಾರತದಲ್ಲಾಗಿರಲಿ ಮರ್ಯಾದಾ ಹತ್ಯೆ ಘಟನೆಗಳು ಇಡೀ ದೇಶದಲ್ಲಿ ಜಾಸ್ತಿಯಾಗುತ್ತಿದೆ. ಕೋಮು ದೌರ್ಜನ್ಯದ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿದ್ದರೂ ರಾಜಕೀಯ ಪಕ್ಷಗಳಿಗೆ ಮತ್ತು ಸರ್ಕಾರಗಳಿಗೆ ಮರ್ಯಾದಾ ಹತ್ಯೆಗೆ ನಿರ್ದಿಷ್ಟ ಶಿಕ್ಷೆ ವಿಧಿಸುವ ಕಾನೂನು ಕೂಡ ಇಲ್ಲ. ಪ್ರಸ್ತುತ ಭಾರತದ ಕಾನೂನಿನಲ್ಲಿ ಮರ್ಯಾದಾ ಹತ್ಯೆಯನ್ನು ಕೊಲೆ ಎಂದು ಪರಿಗಣಿಸಲಾಗುತ್ತದೆ. ಭಾರತೀಯ ದಂಡ ಸಂಹಿತೆಯಡಿ ಮರ್ಯಾದಾ ಹತ್ಯೆಗೆ ವಿಶೇಷ ಸೆಕ್ಷನ್ ನನ್ನು ಸಂಸತ್ತಿನಲ್ಲಿ ಕೂಡಲೇ ಶಾಸನವಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.