ರಾಮ ಹೇಗೆ ಸಂಭಾವಿತ ವ್ಯಕ್ತಿ ಎನಿಸುತ್ತಾನೆ. ಅವನು ತನ್ನ ಮಡದಿ ಸೀತೆಯನ್ನು ಸೋದರನ ಜೊತೆ ಆ ದಟ್ಟ ಅರಣ್ಯದಲ್ಲಿ ಬಿಟ್ಟು ಹೋಗಿರಲಿಲ್ಲವೇ? ಜಿಂಕೆಯನ್ನು ಹುಡುಕಲು ತನ್ನ ಅತ್ತಿಗೆಯನ್ನು ಆ ಕಾಡಿನಲ್ಲಿ ಒಂಟಿಯಾಗಿ ಬಿಟ್ಟು ಹೋದ ಲಕ್ಷ್ಮಣ ಮಾಡಿದ್ದು ಕೂಡ ಸರಿಯಲ್ಲ. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ರಾವಣ ಸೀತೆಯ ಜೊತೆ ಮೃದುವಾಗಿ ಸಂಭಾವಿತನಾಗಿ ನಡೆದುಕೊಳ್ಳುತ್ತಾನೆ. ನಂತರ ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಅಪಹರಿಸಿದ ರಾವಣ ಆಕೆಯನ್ನು ಅಶೋಕ ಮರದ ಕೆಳಗೆ ಇರಿಸುತ್ತಾನೆ. ಆಕೆಯನ್ನು ಒಂದು ಬಾರಿ ಕೂಡ ಮುಟ್ಟುವ ಪ್ರಯತ್ನ ಸಹ ಮಾಡುವುದಿಲ್ಲ. ಇಂದಿನ ರಾಮರು ರಾವಣನ ಈ ಉತ್ತಮ ಗುಣಗಳನ್ನು ತಿಳಿದುಕೊಳ್ಳಬೇಕು ಎಂದು ಸಚಿವರು ಹೇಳಿದ್ದರು.