ಕೇಂದ್ರದ ಎನ್ ಡಿಎ ಸರ್ಕಾರ ಮೂರು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ತಮ್ಮ ಕಚೇರಿಯಲ್ಲಿ ಮಾತನಾಡಿರುವ ಅವರು, ಅಂದು ನಾನು ಪಕ್ಷದ ಅಧ್ಯಕ್ಷನಾಗಿದ್ದೆತ. ನರೇಂದ್ರ ಮೋದಿಯವರು ಪ್ರಚಾರದ ಮುಖ್ಯಸ್ಥರಾಗಿದ್ದರು. ಪ್ರಚಾರದ ವೇಳೆ ಜನರ ಪ್ರತಿಕ್ರಿಯೆ ಹಾಗೂ ಅಭಿಪ್ರಾಯಗಳ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೆವು. ಬಿಜೆಪಿ ಸರಿಯಾದ ನಡೆಯಲ್ಲಿ ನಡೆಯುತ್ತಿದ್ದು ನ್ಯಾಯಯುತವಾಗಿ ಸ್ಪರ್ಧಿಸಿ, ಇತರೆ ಪಕ್ಷಗಳ ಸಹಾಯದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ನಾವು ಊಹಿಸಿದ್ದೆವು.