ಗೋಲಿಬಾರ್ ಪ್ರಕರಣದ ನಂತರ ಮಧ್ಯಪ್ರದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತಡೆಗೆ ಶಿವರಾಜ್ ಸಿಂಗ್ ಚೌಹ್ವಾಣ್ ಜೂ.10 ರಿಂದ ಉಪವಾಸ ನಿರಶನ ಪ್ರಾರಂಭಿಸಿದ್ದಾರೆ. ಉಪವಾಸ ನಿರಶನದ 2 ನೇ ದಿನ ಪತ್ರಕರ್ತರೊಂದಿಗೆ ಮಾತನಾಡಿರುವ ಶಿವರಾಜ್ ಸಿಂಗ್ ಚೌಹ್ವಾಣ್, ರೈತರಿಗಾಗಿ ಉತ್ತ್ತಮವಾದುದ್ದನ್ನೇ ಮಾಡಲು ಯತ್ನಿಸಿದ್ದೇನೆ, ರೈತರ ಸಮಸ್ಯೆ ನಮ್ಮ ಸಮಸ್ಯೆಯೂ ಹೌದು ಎಂದು ಹೇಳಿದ್ದು, ಕೃಷಿಯನ್ನು ಲಾಭದಾಯಕ ಕೆಲಸವನ್ನಾಗಿ ಮಾಡುವುದಕ್ಕೆ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.