ಕೇರಳ ಮಾಧ್ಯಮ ವರದಿಯನ್ನು ತಳ್ಳಿಹಾಕಿದ ಶೃಂಗೇರಿ ಮಠದ ಆಡಳಿತಾಧಿಕಾರಿಗಳು
ಶೃಂಗೇರಿ ಕಿರಿಯ ಶ್ರೀಗಳಿಗೆ ಮೀಸಲಾಗಿದ್ದ ಆಸನವನ್ನು ಕೇರಳ ಸಚಿವರು ತೆರವುಗೊಳಿಸಿದ್ದಾರೆ ಎಂದು ಪ್ರಕಟವಾಗಿದ್ದ ಮಲಯಾಳಂ ಪತ್ರಿಕೆಯ ವರದಿಯ ಬಗ್ಗೆ ಸ್ಪಷ್ಟನೆ ಕೇಳಲು ಕನ್ನಡಪ್ರಭ.ಕಾಂ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿಗಳಾಗಿರುವ ವಿ.ಆರ್ ಗೌರಿಶಂಕರ್ ಅವರನ್ನು ಸಂಪರ್ಕಿಸಿದ್ದು, "ಸಾಮಾಜಿಕ ಜಾಲತಾಣ ಹಾಗೂ ಮಲಯಾಳಂ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ನಿಜವಲ್ಲ ಎಂದು ಹೇಳಿದ್ದಾರೆ.
ವೇದಿಕೆ ಮೇಲೆ ಶ್ರೀಗಳು ಕೂಡುವ ಸಿಂಹಾಸನ ಕಾಣಲಿಲ್ಲ
ಮಲಯಾಳಂ ನ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ಜೊತೆ ಸಚಿವರು ವಿಶೇಷ ಆಸನವನ್ನು ತೆರವುಗೊಳಿಸುತ್ತಿರುವ ಫೋಟೊ ಸಹ ಪ್ರಕಟವಾಗಿದೆ. ಆದರೆ ಅಲ್ಲಿ ತೆರವುಗೊಳಿಸಲಾಗುತ್ತಿರುವ ಮಾದರಿಯ ವಿಶೇಷ ಆಸನವನ್ನು ಶೃಂಗೇರಿ ಶ್ರೀಗಳು ಯಾವುದೇ ಸಮಾರಂಭದಲ್ಲಿಯೂ ಬಳಸುವುದಿಲ್ಲ. ಬದಲಾಗಿ ಯಾವುದೇ ಕಾರ್ಯಕ್ರಮಗಳಿಗೆ ತೆರಳಿದರೂ ಶ್ರೀಮಠದಿಂದಲೇ ಸಿಂಹಾಸನವನ್ನು ಕೊಂಡೊಯ್ಯಲಾಗುತ್ತದೆ. "ಶ್ರೀಗಳು ಕಾರ್ಯಕ್ರಮದಲ್ಲಿ ಯಾವುದೇ ಅನುಗ್ರಹ ಭಾಷಣ ಮಾಡಿರುವುದಿಲ್ಲ. ಪುಷ್ಕರಣಿಗೆ ಮಂತ್ರಾಕ್ಷತೆ ಹಾಕಿ, ಗಂಗಾ ಪೂಜೆ ನೆರವೇರಿಸಿ ಸಮಾರಂಭ ನಡೆದ ಸ್ಥಳದಿಂದ ನಿರ್ಗಮಿಸಿದರು. ನಂತರದಲ್ಲಿ ಅಲ್ಲಿದ್ದ ಪುಷ್ಪಾಂಜಲಿ ಸ್ವಾಮಿಯವರಿಗೆ ವೇದಿಕೆ ಮೇಲೆ ಹತ್ತಿ ಬರಲಾಗದ್ದರಿಂದ ಅವರಿಗಾಗಿ ಮೇಲಿದ್ದ ಪೀಠವನ್ನು ಕೆಳಗೆ ಹಾಕಿ ಆಸನವನ್ನು ಕಲ್ಪಿಸಲಾಗಿದೆ" ಎಂದು ಶ್ರೀಮಠದ ಸಿಬ್ಬಂದಿಗಳು ಹೇಳಿದ್ದಾರೆ.