ಕೊಚ್ಚಿ ಮೆಟ್ರೋ ಉದ್ಘಾಟನೆ ವಿವಾದ: ನನಗೆ ಬೇಸರವಿಲ್ಲ, ಪ್ರಧಾನಿ ಮೋದಿ ಭದ್ರತೆ ಮುಖ್ಯ- ಶ್ರೀಧರನ್

ಕೊಚ್ಚಿ ಮೋಟ್ರೋ ಉದ್ಘಾಟನಾ ಸಮಾರಂಭದ ಗಣ್ಯರ ಪಟ್ಟಿಯಲ್ಲಿ ನನ್ನ ಹೆಸರಿಲ್ಲಿರುವುದಕ್ಕೆ ನನಗೆ ಯಾವುದೇ ರೀತಿಯ ನಿರಾಶೆಯಾಗಲೀ, ಬೇಸರವಾಗಲೀ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭದ್ರತೆಯ ಪ್ರಮುಖವಾದದ್ದು ಎಂದು ಮೆಟ್ರೋ...
ಮೆಟ್ರೋ ಮನುಷ್ಯ ಇ ಶ್ರೀಧರನ್
ಮೆಟ್ರೋ ಮನುಷ್ಯ ಇ ಶ್ರೀಧರನ್
ಕೊಚ್ಚಿ: ಕೊಚ್ಚಿ ಮೋಟ್ರೋ ಉದ್ಘಾಟನಾ ಸಮಾರಂಭದ ಗಣ್ಯರ ಪಟ್ಟಿಯಲ್ಲಿ ನನ್ನ ಹೆಸರಿಲ್ಲಿರುವುದಕ್ಕೆ ನನಗೆ ಯಾವುದೇ ರೀತಿಯ ನಿರಾಶೆಯಾಗಲೀ, ಬೇಸರವಾಗಲೀ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭದ್ರತೆಯ ಪ್ರಮುಖವಾದದ್ದು ಎಂದು ಮೆಟ್ರೋ ಮನುಷ್ಯ ಇ ಶ್ರೀಧರನ್ ಅವರು ಹೇಳಿದ್ದಾರೆ. 
ಇ.ಶ್ರೀಧರನ್ ಅವರು ಕೊಚ್ಚಿ ಮೆಟ್ರೋ ಯೋಜನೆಯ ಪ್ರಧಾನ ಸಲಹೆಗಾರರಾಗಿದ್ದು, ಮೆಟ್ರೋ ಉದ್ಘಾಟನಾ ಸಮಾರಂಭದ ಗಣ್ಯರ ಪಟ್ಟಿಯಲ್ಲಿ ಶ್ರೀಧರನ್ ಅವರ ಹೆಸರು ಕಣ್ಮರೆಯಾಗಿರುವುದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. 
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶ್ರೀಧರನ್ ಅವರು, ವಿಚಾರವನ್ನು ವಿವಾದ ಮಾಡಬೇಡಿ. ಪ್ರಧಾನಿ ಮೋದಿಯವರ ಭದ್ರತೆಯ ಪ್ರಮುಖವಾದದ್ದು. ಭದ್ರತಾ ಸಂಸ್ಥೆಗಳ ಅಧಿಕಾರಿಗಳು ನೀಡುವ ಸಲಹೆ, ಸೂಚನೆಗಳನ್ನು ಕೇಳಬೇಕು. ಪಟ್ಟಿಯಲ್ಲಿ ನನ್ನ ಹೆಸರಿಲ್ಲದಿರುವುಕ್ಕೆ ನನಗಾವುದೇ ಬೇಸವಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com