ಮಾಧ್ಯಮಗಳ ವರ್ತನೆ ಕುರಿತಂತೆ ಕಿಡಿಕಾಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಪ್ರತೀ ಸುದ್ದಿಗಳನ್ನೂ ಬ್ರೇಕಿಂಗ್ ನ್ಯೂಸ್ ಗಳೆಂದು ತೋರಿಸುತ್ತವೆ. ಅಗತ್ಯವಿರುವ ಸುದ್ದಿಗಳು ಬ್ರೇಕಿಂಗ್ ನ್ಯೂಸ್ ಆಗಿರುವುದಿಲ್ಲ. ಊಹಿಸಿರುವ, ಕಲ್ಪನೆ ಮಾಡಿರುವ ಸುದ್ದಿಗಳು ಬ್ರೇಕಿಂಗ್ ನ್ಯೂಸ್ ಆಗಿರುತ್ತವೆ. ಯಾವುದೇ ಸತ್ಯಾಂಶಗಳಿಲ್ಲದೆಯೇ ಅವುಗಳು ಸುದ್ದಿಯಾಗಿರುತ್ತವೆ. "ದೃಢೀಕರಣದೊಂದಿಗಿರುವ ಮಾಹಿತಿಯು" ಸಮಾಜದ ಸಮಾಜಘಾತುಕರರ ವಿರುದ್ಧ ಯುದ್ಧ ಸಾಮಾಗ್ರಿಯಾಗಿರುತ್ತದೆ.