ಅನಂತ ನಾಗ್ ಜಿಲ್ಲೆಯ ಅರ್ವನಿ ಗ್ರಾಮದಲ್ಲಿ ಶುಕ್ರವಾರವಷ್ಟೇ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜುನದ್ ಮತ್ತು ಆತನ ಇಬ್ಬರು ಸಹಚರರು ಸಾವಿಗೀಡಾಗಿದ್ದರು. ಕುಲ್ಗಾಮ್ ನ ಖುದ್ವಾನಿ ಗ್ರಾಮದಲ್ಲಿ ಜುನೈದ್ ಅಂತ್ಯ ಸಂಸ್ಕಾರ ನಡೆಯಿತು. ಜುನೈದ್ ಪಾರ್ಥಿವ ಶರೀರ ದಫನಕ್ಕೂ ಮೊದಲು ನಾಲ್ಕು ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದ ಪ್ರಾರ್ಥನೆಗಳನ್ನು ಸಲ್ಲಿಸಲಾಗಿತ್ತು.