ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಬಹಿರಂಗವಾಗಿಯೇ ಯೋಧರ ಮೇಲೆ ದಾಳಿ ಮಾಡುತ್ತಿರುವ ಯುವಕರನ್ನು ಬೆಂಬಲಿಸುತ್ತಿದ್ದಾರೆ. ಪ್ರಸ್ತುತ ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಗೆ ಯೋಧರನ್ನು ದೂಷಣೆ ಮಾಡಲಾಗುತ್ತಿದೆ. ರೈತರ ಕುರಿತಂತೆ ಹಾಗೂ ರಾಷ್ಟ್ರ ಕುರಿತ ವಿಚಾರಗಳ ಕುರಿತಂತೆ ನಿಲುವು ತೆಗೆದುಕೊಂಡರೆ, ಅದು ಪಾಠವನ್ನು ಕಲಿಸುವಂತಿರಬೇಕು. ಆದರೆ, ಮೆಹಬೂಬಾ ಮುಫ್ತಿಯವರ ಬಗ್ಗೆ ಬಿಜೆಪಿ ಒಂದು ಪದವನ್ನು ಮಾತನಾಡುವುದಿಲ್ಲ. ಇದರ ಅರ್ಥ ಅವರು ಕಲ್ಲು ತೂರಾಟಗಾರರಿಗೆ ಬೆಂಬಲ ನೀಡುತ್ತಿದ್ದಾರೆಂಬುದೇ.