ಪಂಡಿತ್ ಅವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಆಯೂಬ್ ಪಂಡಿತ್ ಅವರ ಹತ್ಯೆ ನಿಜಕ್ಕೂ ನಾಚಿಕೆಗೇಡಿನ ವರ್ತನೆಯಾಗಿದೆ. ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವವರನ್ನೇ ಹತ್ಯೆ ಮಾಡಿದರೆ, ಇದಕ್ಕಿಂತ ನಾಚಿಕೆಗೇಡಿನವ ಕೆಲಸ ಬೇರೊಂದಿಲ್ಲ. ಕಲ್ಲು ತೂರಾಟಗಾರರ ವರ್ತನೆ ವಿಪರೀತವಾಗುತ್ತಿದ್ದು, ಭದ್ರತಾ ಸಿಬ್ಬಂದಿಗಳ ತಾಳ್ಮೆಯನ್ನು ಪರೀಕ್ಷಿಸುವ ಯತ್ನ ಮಾಡಬಾರದು ಎಂದು ಹೇಳಿದ್ದಾರೆ.