ಭದ್ರತಾ ಪಡೆಗಳು-ನಕ್ಸಲರ ನಡುವೆ ಗುಂಡಿನ ಕಾರ್ಯಾಚರಣೆ ನಡೆದು ಹೆಚ್ಚಿನ ಹಾನಿ ಸಂಭವಿಸಿದರ ಬಗ್ಗೆ ಮಾಹಿತಿ ಪಡೆದ ಐಎಎಫ್ ನ ಟಾಸ್ಕ್ ಫೋರ್ಸ್ ಕಮಾಂಡರ್ ಹೆಲಿಕಾಫ್ಟರ್ ಗಳನ್ನು ನಿಯೋಜನೆ ಮಾಡಲು ನಿರ್ಧರಿಸಿದರು. ದಟ್ಟ ಕಾಡಿನ ನಡುವೆ ನಕ್ಸಲ್ ಪೀಡಿತ ಪ್ರದೇಶವಿದ್ದು, ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶವನ್ನು ಹೆಚ್ಚಿನ ಅಪಾಯವಿರುವ ಪ್ರದೇಶವನ್ನಾಗಿ ಘೋಷಿಸಲಾಗಿದೆ.