ಡಿಸೆಂಬರ್ ನಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಡೆಯಲಿದೆ. ಆದರೆ ಕಾಂಗ್ರೆಸ್ ಮಾತ್ರ ಇನ್ನೂ ತಯಾರಿ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಶಂಕರ್ ಸಿಂಗ್ ವಘೇಲಾ, ಪಾಟಿದಾರ್, ದಲಿತ, ಒಬಿಸಿ ಬಿಕ್ಕಟುಗಳು ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಬಳಕೆ ಮಾಡಿಕೊಳ್ಳಬಹುದಾದ ಅನೇಕ ಅಂಶಗಳಿವೆ. ಆದರೂ ಕಾಂಗ್ರೆಸ್ ಮಾತ್ರ ಅದ್ಯಾವುದರ ಲಾಭ ಪಡೆಯಲು ಯತ್ನಿಸುತ್ತಿಲ್ಲ. ಉತ್ತರ ಪ್ರದೇಶ ಚುನಾವಣೆಯನ್ನೂ ಇದೇ ರೀತಿ ಕಳೆದುಕೊಂಡರು. ಕನಿಷ್ಠ ದೆಹಲಿಯಲ್ಲಿರುವವರಿಗೆ ಡಿಸೆಂಬರ್ ನಲ್ಲಿ ಗುಜರಾತ್ ಚುನಾವಣೆ ಇರುವುದಾದರೂ ನೆನಪಿದೆಯೇ ಎಂದು ವಘೇಲಾ ಪ್ರಶ್ನಿಸಿದ್ದಾರೆ.