ಒಂದು ಪೀಳಿಗೆ ಎದುರಿಸಿದ ಐತಿಹಾಸಿಕ ಗಾಯದ ಗುರುತಾಗಿದ್ದ ತುರ್ತುಪರಿಸ್ಥಿತಿ ಇಂದು ಕುತೂಹಲದ ಸಂಗತಿಯಾಗಿದೆ. ಇಂದಿನ ಯುವ ಪೀಳಿಗೆಗೆ ತುರ್ತು ಪರಿಸ್ಥಿತಿಯ ಬಗ್ಗೆ ಅಷ್ಟಾಗಿ ಅರಿವಿಲ್ಲ. ಕೆಲವರು ತುರ್ತು ಪರಿಸ್ಥಿತಿಯ ದಿನಗಳಲ್ಲಿ ನೀಡಲಾಗಿದ್ದ ಹಿಂಸೆಯ ಬಗ್ಗೆ ಉರು ಹೊಡೆಯುತ್ತಿದ್ದಾರೆ. ತುರ್ತು ಪರಿಸ್ಥಿತಿ ಕಳೆದು 4 ದಶಕಗಳಾಗಿವೆ, ಅದನ್ನು ಮರೆಯಬಾರದು, ಮನ್ನಿಸಲೂಬಾರದು, ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.