ಬಂದ್ ಆದ ಜಮ್ಮು-ಶ್ರೀನಗರ ಹೆದ್ದಾರಿ: ಇನ್ನೊಂದೆಡೆ ಭಾರೀ ಭೂಕುಸಿತದಿಂದಾಗಿ 300 ಕಿಲೋ ಮೀಟರ್ ಉದ್ದದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಕೂಡ ರಂಬನ್ ಮತ್ತು ಉದಂಪುರ್ ಜಿಲ್ಲೆಗಳಲ್ಲಿ ಬಂದ್ ಆಗಿವೆ. ಇಲ್ಲಿ ವಾಹನ ಸಂಚರಿಸುತ್ತಿಲ್ಲ.
ಭಾರೀ ಮಳೆಯಿಂದಾಗಿ ನಶ್ರಿ, ಬಾಲಿ ನಲ್ಹ ಮತ್ತು ಪಂತಿಯಲ್ ಪ್ರದೇಶದಲ್ಲಿ ಭೂ ಕುಸಿತವುಂಟಾಗಿ ಹೆದ್ದಾರಿ ಮುಚ್ಚಲ್ಪಟ್ಟಿದ್ದು ನೂರಾರು ಜನರಿಗೆ ಸಂಚರಿಸುವುದು ಅಸಾಧ್ಯವಾಗಿದೆ.
ಧಾರಾಕಾರ ಸತತ ಮಳೆಯಿಂದಾಗಿ ರಂಬನ್ ಮತ್ತು ಪಂತಿಯಾಲ್ ಪ್ರದೇಶದಲ್ಲಿ ಎರಡು-ಮೂರು ಬಾರಿ ಭೂ ಕುಸಿತವುಂಟಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಭೂ ಕುಸಿತ ಉದಂಪುರ್ ಜಿಲ್ಲೆಯ ಬಾಲಿ ನಲ್ಹ ಪ್ರದೇಶದಲ್ಲಿ ಉಂಟಾಗಿ ರಂಬನ್ ಜಿಲ್ಲೆಯ ನಶ್ರಿ ಸುರಂಗ ಮಾರ್ಗದಲ್ಲಿ ಸಣ್ಣ ಮಟ್ಟಿನ ಭೂ ಕುಸಿತವಾಗಿದೆ. ಇದರಿಂದಾಗಿ ಇಂದು ಬೆಳಗ್ಗೆಯಿಂದ 150ಕ್ಕೂ ಹೆಚ್ಚು ವಾಹನಗಳು ಹೆದ್ದಾರಿಯ ಅನೇಕ ಕಡೆ ಸಂಚರಿಸಲು ಸಾಧ್ಯವಾಗದೆ ನಿಂತಿವೆ.
ಕುಂಭದ್ರೋಣವರ್ಷದಿಂದಾಗಿ ಹೆದ್ದಾರಿಯಲ್ಲಿನ ಕಲ್ಲು, ಮಣ್ಣುಗಳನ್ನು ತೆರವುಗೊಳಿಸುವ ಕಾರ್ಯ ಕೂಡ ಕಷ್ಟವಾಗುತ್ತಿದೆ.