ಇದರಂತೆ ಭಾರತ ಮತ್ತು ಮ್ಯಾನ್ಮಾರ್ ಗಡಿಯಲ್ಲಿ ಜೂ.6 ರಂದು ಸೀಮಿತ ದಾಳಿ ನಡೆಸಿದ್ದ ಸೇನೆ 70-80 ಉಗ್ರರನ್ನು ಹತ್ಯೆ ಮಾಡಿತ್ತು. ಅದು ಅತ್ಯಂತ ಯಶಸ್ವಿ ಸೀಮಿತ ದಾಳಿಯಾಗಿತ್ತು. ಕೆಲ ಮಾಧ್ಯಮಗಳು ಸೀಮಿತ ದಾಳಿಗೆ ಹೆಲಿಕ್ಯಾಪ್ಟರ್ ಗಳನ್ನು ಬಳಕೆ ಮಾಡಲಾಗಿತ್ತು ಎಂದು ವರದಿ ಮಾಡಿದ್ದವು. ಆದರೆ, ಅಗತ್ಯ ಬಿದ್ದಾಗ ಯೋಧರನ್ನು ಸ್ಥಳಾಂತರಿಸುವ ಸಲುವಾಗಿ ಮಾತ್ರ ಹೆಲಿಕ್ಯಾಪ್ಟರ್ ಗಳನ್ನು ಸನ್ನದ್ಧಗೊಳಿಸಲಾಗಿತ್ತು ಅಷ್ಟೇ. ಹೆಲಿಕ್ಯಾಪ್ಚರ್ ಗಳನ್ನು ಬಳಕೆ ಮಾಡಿರಲಿಲ್ಲ.