ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ನಾವು ರೂ.2,60,000 ಹಣವನ್ನು ಖರ್ಚು ಮಾಡುತ್ತಿದ್ದೇವೆ. ಸಮಾಜದಲ್ಲಿರುವ ಬಡವರಿಗಾಗಿ ಈ ಹಣವನ್ನು ನೀಡುತ್ತಿದ್ದೇವೆ. ನಾನೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿದ್ದೇನೆ. ದೇಶವನ್ನು ಒಡೆಯುವ ಪ್ರಯತ್ನಗಳಿಗೆ ಕ್ಷಮೆಯಿಲ್ಲ. ಪಕ್ಷದ ಅಭಿಪ್ರಾಯವನ್ನು ಈಗಾಗಲೇ ನಮ್ಮ ಹಿರಿಯ ನಾಯಕರು ವ್ಯಕ್ತಪಡಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ನಂಬಿದ್ದೇವೆ. ಆದರೆ, ದೇಶವನ್ನು ಒಡೆಯುವುದರ ಮೇಲಲ್ಲ ಎಂದು ತಿಳಿಸಿದ್ದಾರೆ.