ಚೆನ್ನೈ: ರಾಷ್ಟ್ರಭಕ್ತಿ, ದೇಶಪ್ರೇಮದ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅರ್ನಬ್ ಗೋಸ್ವಾಮಿ ಲಿಬರಲ್ ಬೂಟಾಟಿಕೆಯ ವಿರುದ್ಧ ಕಿಡಿ ಕಾರಿದ್ದು, ನಾನು ರಾಷ್ಟ್ರಗೀತೆಗೆ ಎದ್ದು ನಿಲ್ಲುತ್ತೇನೆ ಹಾಗೂ ಎಂದಿಗೂ ಭಾರತೀಯ ಸೇನೆಯ ಪರವಾಗಿ ಮಾತನಾಡುತ್ತೇನೆ, ಅದು ನನ್ನನ್ನು ಸಂಘಿಯನ್ನಾಗಿಸುತ್ತದೆಯೇ( ಸಂಘ ಪರಿವಾರದವನನ್ನಾಗಿಸುತ್ತದೆಯೇ) ಎಂದು ಪ್ರಶ್ನಿಸಿದ್ದಾರೆ.