'ಆಧಾರ್' ಮಾಹಿತಿ ಸಂಪೂರ್ಣ ಸುರಕ್ಷಿತ: ಕೇಂದ್ರ ಸ್ಪಷ್ಟನೆ

ಆಧಾರ್ ಮಾಹಿತಿಗಳು ದುರುಪಯೋಗವಾಗಿದೆ ಎಂಬ ವರದಿಯನ್ನು ಕೇಂದ್ರ ತಳ್ಳಿಹಾಕಿದ್ದು, ಆಧಾರ್ ಮಾಹಿತಿಗಳು ಸುರಕ್ಷಿತ ಹಾಗೂ ಗೌಪ್ಯವಾಗಿದೆ ಎಂದು ಸ್ಪಷ್ಟನೆ ನೀಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಆಧಾರ್ ಮಾಹಿತಿಗಳು ದುರುಪಯೋಗವಾಗಿದೆ ಎಂಬ ವರದಿಯನ್ನು ಕೇಂದ್ರ ತಳ್ಳಿಹಾಕಿದ್ದು, ಆಧಾರ್ ಮಾಹಿತಿಗಳು ಸುರಕ್ಷಿತ ಹಾಗೂ ಗೌಪ್ಯವಾಗಿದೆ ಎಂದು ಸ್ಪಷ್ಟನೆ ನೀಡಿದೆ. 
ಆಧಾರ್ ಬಯೋಮೆಟ್ರಿಕ್ಸ್ ನ ಮಾಹಿತಿ ಸೋರಿಕೆ ಮತ್ತು ಆರ್ಥಿಕ ನಷ್ಟವಾಗಿದೆ ಎಂಬ ವರದಿಗಳು ಸುಳ್ಳು ಎಂದು ಭಾರತ ವಿಶೇಷ ಗುರುಚಿನ ಚೀಟಿ ಪ್ರಾಧಿಕಾರ ತಿಳಿಸಿದೆ. ಅಲ್ಲದೆ, ಸಹಾಯ ಧನವನ್ನು ಆಧಾರ್ ಗೆ ಜೋಡಣೆ ಮಾಡಿರುವುದಿರಂದಾಗಿ ಕಳೆದ ಎರಡುವರೆ ವರ್ಷಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ರೂ.49,000 ಕೋಟಿ ಉಳಿತಾಯವಾಗಿದೆ. ಈ ವಹಿವಾಟಿನ ಪ್ರಕ್ರಿಯೆಯಲ್ಲಿ ಬಳಕೆದಾರರ ಮಾಹಿತಿ ಕದ್ದ ಯಾವುದೇ ಪ್ರಕರಣಗಳು ನಡೆಸದಿಲ್ಲ, ನಷ್ಟವೂ ಉಂಟಾಗಿಲ್ಲ ಎಂದು ಹೇಳಿದೆ. 
ಆಧಾರ್ ಗೆ ಸಂಬಂಧಿಸಿದಂತೆ ಪ್ರಟಕವಾಗಿರುವ ವರದಿಗಳನ್ನು ಯುಐಡಿಎಐ (ಭಾರತೀಯ ವಿಶೇಷ ಗುರುಚಿನ ಚೀಟಿ ಪ್ರಾಧಿಕಾರ) ಎಚ್ಚರಿಕೆಯಿಂದ ಪರಿಶೀಲನೆ ನಡೆಸಲಿದೆ. ಯುಐಡಿಎಐ ದತ್ತಾಂಶಕ್ಕೆ ಯಾರೂ ಮೋಸ ಮಾಡಿಲ್ಲ. ಯುಐಡಿಎಐ ವಶದಲ್ಲಿರುವ ಜನರ ವೈಯಕ್ತಿಕ ಮಾಹಿತಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಹೀಗಾಗಿ ಯಾರೊಬ್ಬರ ಭಯ ಪಡಬೇಕಾಗಿಲ್ಲ. ಬ್ಯಾಂಕ್ ಗಳೊಂದಿಗೆ ಕೈಜೋಡಿಸಿಕೊಂಡು ವಾಣಿಜ್ಯ ವ್ಯವಹಾರ ನಡೆಸುವ ಕಂಪನಿಗಳಿಗೆ ಮಾಹಿತಿ ನೀಡುವಾಗ ಗ್ರಾಕರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com