ಉತ್ತರಪ್ರದೇಶದ ರ್ಯಾಲಿಯಲ್ಲಿ ಮಾತನಾಡಿರುವ ಅಖಿಲೇಶ್ ಯಾದವ್ ಅವರು ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಿಡಿಕಾರಿದ್ದಾರೆ. ಮೋದಿಯವರು ಸಾಕಷ್ಟು ಮನ್ ಕಿ ಬಾತ್ ಗಳನ್ನು ಆಡಿದ್ದಾರೆ. ಆದರೆ, ಜನರು ಮೋದಿಯವರ ಮನ್ ಕಿ ಬಾತ್ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಇದೀಗ ನಾವು ಅವರಿಗೆ ಹೇಳಬೇಕಿದೆ. ಮನ್ ಕಿ ಬಾತ್ ಸಾಕು, ಇದು ಕಾಮ್ ಕಿ ಬಾತ್ ಆಡುವ ಸಮಯ ಎಂದು ತಿಳಿಸಬೇಕಿದೆ ಎಂದು ಹೇಳಿದ್ದಾರೆ.