ಉತ್ತರ ಪ್ರದೇಶ ಸೋಲಿಗೆ ಅಖಿಲೇಶ್ ಯಾದವ್ ದೂರಬೇಡಿ: ಮುಲಾಯಂ

ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ಭಾನುವಾರ ವಿಧಾನಸಭೆ ಚುನಾವಣೆಯಲ್ಲಿ...
ಮುಲಾಯಂ ಸಿಂಗ್ ಯಾದವ್
ಮುಲಾಯಂ ಸಿಂಗ್ ಯಾದವ್
ಎಟವಾ: ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ಭಾನುವಾರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ತಮ್ಮ ಪುತ್ರ ಹಾಗೂ ನಿರ್ಗಮಿತ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಬೆಂಬಲಕ್ಕೆ ನಿಂತಿದ್ದು, ಸೋಲಿನ ಹೊಣೆ ಯಾರೂ ಹೊರಬೇಕಾಗಿಲ್ಲ ಎಂದಿದ್ದಾರೆ.
ಚುನಾವಣೆ ಸೋಲಿಗೆ ಅಖಿಲೇಶ್ ಯಾದವ್ ರನ್ನು ದೂರಬೇಡಿ ಎಂದಿರುವ ಮುಲಾಯಂ, ಪಕ್ಷದ ವೈಫಲ್ಯವೇ ಸೋಲಿಗೆ ಕಾರಣ ಎಂದಿದ್ದಾರೆ. ಜನರ ಮನ ಗೆಲ್ಲುವಲ್ಲಿ ನಾವು ವಿಫಲರಾಗಿದ್ದು, ಪ್ರತಿಯೊಬ್ಬರು ಈ ಸೋಲಿನ ಹೊಣೆ ಹೊರಬೇಕು ಎಂದು ಹೇಳಿದ್ದಾರೆ.
ಇನ್ನು ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಸಮಾಜವಾದಿ ಪಕ್ಷ ಹಲವು ಹೋರಾಟಗಳನ್ನು ಮಾಡಿ ಅಧಿಕಾರಕ್ಕೆ ಬಂದಿತ್ತು. ಸಾಕಷ್ಟು ಹೋರಾಟ ಮಾಡಿ ಹಲವು ಬಾರಿ ಗೆದ್ದಿದ್ದೇವೆ ಈಗ ಮತ್ತೆ ಹೋರಾಟ ನಡೆಸಿ ಮುಂದಿನ ಬಾರಿ ಗೆಲುವು ಸಾಧಿಸೋಣ ಎಂದು ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com