ನರೇಂದ್ರ ಮೋದಿ-ಯೋಗಿ ಆದಿತ್ಯನಾಥ್
ನರೇಂದ್ರ ಮೋದಿ-ಯೋಗಿ ಆದಿತ್ಯನಾಥ್

ಸಿಎಂ ಆದಿತ್ಯನಾಥ್ ರಿಂದ ಯಾವುದೇ ನೆರವು ಕೇಳಬೇಡಿ: ಉ.ಪ್ರ ಸಂಸದರಿಗೆ ಮೋದಿ ಖಡಕ್ ಎಚ್ಚರಿಕೆ

ತಮಗೆ ಬೇಕಾದ ಅಧಿಕಾರಿಗಳ ವರ್ಗಾವಣೆ, ನೇಮಕಾತಿಗಳಿಗಾಗಿ ಸಿಎಂ ಯೋಗಿ ಆದಿತ್ಯನಾಥ್ ಅವರಿಂದ ನೆರವನ್ನು ಕೇಳಬಾರದು ಎಂದು ಉತ್ತರ ಪ್ರದೇಶದ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
Published on
ನವದೆಹಲಿ: ತಮಗೆ ಬೇಕಾದ ಅಧಿಕಾರಿಗಳ ವರ್ಗಾವಣೆ, ನೇಮಕಾತಿಗಳಿಗಾಗಿ ಸಿಎಂ ಯೋಗಿ ಆದಿತ್ಯನಾಥ್ ಅವರಿಂದ ನೆರವನ್ನು ಕೇಳಬಾರದು ಎಂದು ಉತ್ತರ ಪ್ರದೇಶದ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. 
ಬೆಳಗಿನ ಉಪಹಾರದ ವೇಳೆ ಉತ್ತರ ಪ್ರದೇಶ ಸಂಸದರೊಂದಿಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದಲ್ಲಿ ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸುವುದಕ್ಕೆ ನೆರವಾಗಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಅಷ್ಟೇ ಅಲ್ಲದೇ ಯೋಗಿ ಆದಿತ್ಯನಾಥ್ ಅವರ ಆಡಳಿತದ ಲಕ್ಷ್ಯ ಸುರಾಜ್ಯವನ್ನು ನೀಡುವತ್ತ ಮಾತ್ರ ಕೇಂದ್ರೀಕೃತವಾಗಿರಬೇಕು ಎಂದಿರುವ ಪ್ರಧಾನಿ, ಉತ್ತರ ಪ್ರದೇಶದ ಅಭಿವೃದ್ಧಿಗಾಗಿ ಶಾಸಕರೊಂದಿಗೆ ಜೊತೆಗೂಡಿ ಕೆಲಸ ಮಾಡುವಂತೆ ಹೇಳಿದ್ದಾರೆ. 
ಅಧಿಕಾರವನ್ನು ಅನುಭವಿಸಲು ನಮಗೆ ಜನತೆ ಮತ ನೀಡಿಲ್ಲ, ಕಠಿಣ ಪರಿಶ್ರಮದ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಮತ ನೀಡಿದ್ದಾರೆ ಎಂದು ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾಗಿ ಸಭೆಯಲ್ಲಿ ಭಾಗವಹಿಸಿದ್ದ ಸಂಸದರೊಬ್ಬರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com