ಅಕ್ಟೊಬರ್-ನವೆಂಬರ್ ತಿಂಗಳಲ್ಲಿ ಯೋಜನೆ ಜಾರಿಗೊಳ್ಳಲಿದ್ದು, ಈ ಬಗ್ಗೆ ಸ್ವತಃ ಐಸಿಹೆಚ್ಆರ್ ನ ಅಧ್ಯಕ್ಷ ವೈ ಸುದರ್ಶನ್ ರಾವ್ ಮಾಹಿತಿ ನೀಡಿದ್ದಾರೆ. ಮಾನವ ಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿ ಬರುವ ಐಸಿಹೆಚ್ಆರ್ ಸಂಸ್ಥೆ ರಾಮ ಸೇತು ಮಾನವ ನಿರ್ಮಿತವೋ ಅಥವಾ ನೈಸರ್ಗಿವಾದದ್ದೋ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಈ ಯೋಜನೆಯನ್ನು ನಡೆಸುತ್ತಿರುವುದಾಗಿ ಸುದರ್ಶನ್ ರಾವ್ ತಿಳಿಸಿದ್ದಾರೆ.