ಉತ್ತರ ಪ್ರದೇಶ: ಕೈರಾನದ ಮಾಂಸ ಸಂಸ್ಕರಣ ಘಟಕ ಬಂದ್

ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳ ನಂತರ ಮಾಂಸ ಸಂಸ್ಕರಣ ಘಟಕವನ್ನು ಬಂದ್ ಮಾಡಿಸಲಾಗುತ್ತಿದ್ದು, ಕೈರಾನದಲ್ಲಿರುವ ಅತಿ ಬೃಹತ್ ಮಾಂಸ ಸಂಸ್ಕರಣ ಘಟಕವನ್ನು ಬಂದ್ ಮಾಡಲಾಗಿದೆ.
ಮಾಂಸ ಸಂಸ್ಕರಣ ಘಟಕ ಬಂದ್ (ಸಂಗ್ರಹ ಚಿತ್ರ)
ಮಾಂಸ ಸಂಸ್ಕರಣ ಘಟಕ ಬಂದ್ (ಸಂಗ್ರಹ ಚಿತ್ರ)
Updated on
ಮುಜಾಫರ್ ನಗರ: ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳ ನಂತರ ಮಾಂಸ ಸಂಸ್ಕರಣ ಘಟಕವನ್ನು ಬಂದ್ ಮಾಡಿಸಲಾಗುತ್ತಿದ್ದು, ಕೈರಾನದಲ್ಲಿರುವ ಅತಿ ಬೃಹತ್ ಮಾಂಸ ಸಂಸ್ಕರಣ ಘಟಕವನ್ನು ಬಂದ್ ಮಾಡಲಾಗಿದೆ. 
ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವಿಜಯ ಪ್ರಕಾಶ್ ನೇತೃತ್ವದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಅಕ್ರಮ ನಡೆಯುತ್ತಿರುವುದು ಪತ್ತೆಯಾಗಿದ್ದು, ಮಾಂಸ ಸಂಸ್ಕರಣ ಘಟಕವನ್ನು ಬಂದ್ ಮಾಡಿದ್ದಾರೆ. ಥಾನಾ ಭವನ್, ಜಲಾಲಬಾದ್ ಶಾಮ್ಲಿಯಲ್ಲಿ ಪರವಾನಗಿ ಇಲ್ಲದೇ ನಡೆಸಲಾಗುತ್ತಿದ್ದ ಮಾಂಸದ ಅಂಗಡಿಗಳನ್ನೂ ಸಹ ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ. ಇನ್ನು ಮುಜಾಫರ್ ನಗರ ಜಿಲ್ಲೆಗಳಲ್ಲೂ ಹಲವು ಮಾಂಸದ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. 
ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ತೆರವುಗೊಳಿಸಲಾಗುತ್ತಿದೆ. ಇದರ ಭಾಗವಾಗಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಸಂಸ್ಕರಣ ಘಟಕವನ್ನೂ ಬಂದ್ ಮಾಡಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com