ಬ್ರಹ್ಮ ಕುಮಾರಿ ಸಂಸ್ಥೆಯ 80ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ನಾನು ಕರಾಚಿಯಲ್ಲಿಯೇ ಹುಟ್ಟಿದ್ದೆ. ಆದರೆ, ಶಿಸ್ತು ಮತ್ತು ಶಿಕ್ಷಣವನ್ನು ಪಡೆದುಕೊಂಡಿದ್ದು ಮಾತ್ರ ಆರ್'ಎಸ್ಎಸ್ ನಿಂದ. ಕೆಟ್ಟದ್ದನ್ನು ಎಂದಿಗೂ ಪ್ರಚಾರ ಮಾಡಬಾರೆದೆಂಬುದನ್ನು ಆರ್'ಎಸ್ಎಸ್'ನಿಂದ ಕಲಿತೆ. ದೇಶದ ಕುರಿತ ಭಕ್ತಿ ಹಾಗೂ ಸಮರ್ಪಣೆಯನ್ನು ಆರ್'ಎಸ್ಎಸ್ ನಿಂದ ಕಲಿತೆ ಎಂದು ಹೇಳಿದ್ದಾರೆ.