ಶಿವಪಾಲ್ ಯಾದವ್
ಶಿವಪಾಲ್ ಯಾದವ್

ಮುಲಾಯಂಗೆ ಎಸ್'ಪಿ ಪಕ್ಷದ ನೇತೃತ್ವ ವಹಿಸದಿದ್ದರೆ ಹೊಸ ಪಕ್ಷ ಕಟ್ಟುತ್ತೇನೆ: ಶಿವಪಾಲ್

ಇನ್ನು 3 ತಿಂಗಳೊಳಗಾಗಿ ಸ್ಥಾನದಿಂದ ಕೆಳಗಿಳಿದು ಪಕ್ಷದ ನೇತೃತ್ವವನ್ನು ಮುಲಾಂಯ ಸಿಂಗ್ ಅವರಿಗೆ ವಹಿಸದೇ ಹೋದಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡುತ್ತೇನೆಂದು ಮುಲಾಯಂ ಸೋದರ ಶಿವಪಾಲ್ ಯಾದವ್ ಅವರು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ...
Published on
ಕಾನ್ಪುರ: ಇನ್ನು 3 ತಿಂಗಳೊಳಗಾಗಿ ಸ್ಥಾನದಿಂದ ಕೆಳಗಿಳಿದು ಪಕ್ಷದ ನೇತೃತ್ವವನ್ನು ಮುಲಾಂಯ ಸಿಂಗ್ ಅವರಿಗೆ ವಹಿಸದೇ ಹೋದಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡುತ್ತೇನೆಂದು ಮುಲಾಯಂ ಸೋದರ ಶಿವಪಾಲ್ ಯಾದವ್ ಅವರು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. 
ಸಮಾಜವಾದಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಮುಲಾಯಂಗೆ ಪಕ್ಷದ ಚುಕ್ಕಾಣಿ ನೀಡುವುದಾಗಿ ಈ ಹಿಂದೆಯೇ ಅಖಿಲೇಶ್ ಹೇಳಿದ್ದರು. ಆದರೆ, ಆ ಕೆಲಸ ಇನ್ನೂ ಆಗಿಲ್ಲ. ಇದಕ್ಕೆ ಇನ್ನೂ 3 ತಿಂಗಳೂ ಸಮಯ ನೀಡುವೆ. ಆಗಲೂ ನೇತಾಜಿಯವರಿಗೆ ಪಕ್ಷದ ನೇತೃತ್ವ ನೀಡದೇ ಹೋದರೆ, ಹೊಸ ಪಕ್ಷ ಸ್ಥಾಪನೆ ಖಚಿತ ಎಂದು ಶಿವಪಾಲ್ ಹೇಳಿದ್ದಾರೆ. 
ಇದೇ ವೇಳೆ ರಾಮ್ ಗೋಪಾಲ್ ಅವರ ಹೆಸರನ್ನು ಹೇಳದೆಯೇ ಅವರ ವಾಗ್ದಾಳಿ ನಡೆಸಿರುವ ಶಿವಪಾಲ್ ಅವರು, ರಾಮ್ ಗೋಪಾಲ್ ಒಬ್ಬ ಶಕುನಿ ಇದ್ದಂತೆಯ ಮೊದಲು ಅವರು ಭಗವತ್ ಗೀತೆಯನ್ನು ಒದಬೇಕು. ಶಕುನಿ ಏನು ಮಾಡಿದ್ದನೋ ಅದನ್ನೇ ರಾಮ್ ಗೋಪಾಲ್ ಅವರು ಮಾಡಿದ್ದಾರೆ, ರಾಮ್ ಗೋಪಾಲ್ ಮೊದಲು ಭಗವತ್ ಗೀತೆಯನ್ನು ಓದಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com